Advertisement

ಕರೆಂಟೇ ಇಲ್ಲದ ಆ ಊರಲ್ಲಿ, ಸೀಮೆಎಣ್ಣೆ ದೀಪವೂ ಬೆಳಗುವುದಿಲ್ಲ!

02:52 PM May 20, 2017 | |

ಅಲ್ಲಿ ಕರೆಂಟೇ ಇಲ್ಲ! ಕರೆಂಟಿಲ್ಲ ಅಂತ ಸೀಮೆಎಣ್ಣೆಯ ದೀಪವನ್ನು ಅಲ್ಲಿ ಉರಿಸುವ ಹಾಗೆಯೇ ಇಲ್ಲ! ಏಕೆಂದರೆ, ಆ ಊರಿನಲ್ಲಿ ಸೀಮೆಎಣ್ಣೆ ನಿಷೇಧ! ಗೋವಾಕ್ಕೆ ಅಂಟಿಕೊಂಡಿರುವ ನಮ್ಮ ಕಾರವಾರ ಜಿಲ್ಲೆಯ ಹಿರೇಮನೆ ಮತ್ತು ಮಲೆಗದ್ದೆ ಎಂಬ ಹಳ್ಳಿಗಳ ಸ್ಥಿತಿ ಇದು. ಹಾಲಕ್ಕಿ ಒಕ್ಕಲಿಗರೇ ಅಧಿಕ ಸಂಖ್ಯೆಯಲ್ಲಿರುವ ಎರಡು ಅವಳಿ ಹಳ್ಳಿಗಳನ್ನು ತಲುಪಲು ಬೃಹತ್‌ ಅರಣ್ಯವನ್ನು ದಾಟಬೇಕು. ದೊಡ್ಡ ಬೆಟ್ಟಗಳನ್ನೇ ಹತ್ತಬೇಕು. ಇಲ್ಲಿಗೆ ಕರೆಂಟನ್ನು ತಲುಪಿಸುವುದೂ ಕಷ್ಟದ ಮಾತೇ. ಹಿಂದೊಮ್ಮೆ ಊರಿಗೆ ಸೀಮೆಎಣ್ಣೆ ತಂದು, ಯಾರೋ ದೀಪ ಹಚ್ಚಿದಾಗ ಗುಡಿಸಲಿಗೆ ಬಂಕಿ ಹೊತ್ತಿಕೊಂಡು ಅನಾಹುತ ಆಗಿತ್ತಂತೆ. ಈ ಕಾರಣದಿಂದ ಹಿರಿಯರು ಇಲ್ಲಿಗೆ ಸೀಮೆಎಣ್ಣೆಗೆ ನಿಷೇಧ ಹೇರಿದ್ದರು. ಅಡುಗೆ ಮನೆಯೊಳಗಿನ ಒಲೆಯ ಬೆಂಕಿಯ ಬೆಳಕಿನಲ್ಲೇ ಇವರ ರಾತ್ರಿ ಕಳೆಯುತ್ತದೆ!

Advertisement

ಇಲ್ಲಿವರು ನಿತ್ಯ ಸೂರ್ಯನನ್ನೇ ನಂಬಿ ಬದುಕುತ್ತಾರೆ. ಬೆಳಗ್ಗೆ ಸೂರ್ಯ ಏಳುವಾಗಲೇ ಎದ್ದು, ಮುಳುಗುವುದರೊಳಗೆ ಎಲ್ಲ ಕೆಲಸ ಮುಗಿಸಿ, ಸಂಜೆ 7ರ ವೇಳೆಗೆ ನಿದ್ರೆಗೆ ಜಾರುತ್ತಾರೆ!

Advertisement

Udayavani is now on Telegram. Click here to join our channel and stay updated with the latest news.

Next