Advertisement

ಮೋಟಾರು ವಾಹನ ಮಸೂದೆಗೆ ಸರ್ವಪಕ್ಷ ಆಕ್ಷೇಪ

08:30 AM Jul 28, 2017 | Team Udayavani |

ಹೊಸದಿಲ್ಲಿ: ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡ ವಿಧಿಸುವ, ಪರಿಹಾರ ಮೊತ್ತ ಹೆಚ್ಚಿಸುವ ಅಂಶಗಳನ್ನು ಹೊಂದಿದ ನೂತನ ಮೋಟಾರು ವಾಹನ ಮಸೂದೆಗೆ ರಾಜ್ಯಸಭೆಯಲ್ಲಿ ಸರ್ವ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಪಕ್ಷಗಳು ತಮ್ಮ ಆಕ್ಷೇಪಗಳನ್ನು ಸೋಮವಾರ ಲಿಖೀತವಾಗಿ ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ. ಕುರಿಯನ್‌ ಅವರಿಗೆ ಸಲ್ಲಿಸಿವೆ. ಇದನ್ನು ಪಡೆದು ಕೇಂದ್ರ ಸಾರಿಗೆ ಸಚಿವಾಲಯ ಪ್ರತಿಯೊಂದಕ್ಕೂ ಲಿಖೀತ ರೂಪದಲ್ಲಿ ಉತ್ತರವನ್ನು ಉಪಾಧ್ಯಕ್ಷರಿಗೆ ಮರುಸಲ್ಲಿಸಲಿದೆ.

Advertisement

ಆದರೆ ಹೊಸ ಮಸೂದೆ ಮೋಟಾರು ವಾಹನ ವಲಯದಲ್ಲಿ ಭಾರೀ ಸುಧಾರಣೆಯ ಕ್ರಮಗಳನ್ನು ಒಳಗೊಂಡಿದೆ ಎಂದು ಈ ಕುರಿತಾಗಿ ನಡೆದ ಸರ್ವಪಕ್ಷ ಸಭೆಯ ಬಳಿಕ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದರು. ನೂತನ ಮಸೂದೆಯಲ್ಲಿರುವ ಅಂಶಗಳು ಅತಿ ಕಠಿನವಾಗಿದ್ದು, ಮರುಪರಿಶೀಲನೆ ನಡೆಸಬೇಕು. ಈ ಸಂಬಂಧ ರಾಜ್ಯಸಭೆಯ ಆಯ್ಕೆ ಸಮಿತಿಗೆ ನೀಡಬೇಕು ಎಂಬುದು ವಿಪಕ್ಷಗಳ ಬೇಡಿಕೆಯಾಗಿದೆ. ‘ವಾರ್ಷಿಕ ದೇಶಾದ್ಯಂತ ರಸ್ತೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜೀವಹಾನಿಯಾಗುತ್ತದೆ. ಇದನ್ನು ತಡೆಯುವುದು ಅಗತ್ಯವಿದ್ದು, ಕಾನೂನು ಜಾರಿಯಲ್ಲಿನ ವಿಳಂಬ ಮತ್ತಷ್ಟು ಜೀವ ಹಾನಿಗೆ ಕಾರಣವಾಗುತ್ತದೆ’ ಎಂದು ಗಡ್ಕರಿ ಹೇಳಿದರು. ಹೊಸ ಕಾಯ್ದೆ 1988ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾಗಿದೆ. ಕಳೆದ ವರ್ಷ ಈ ಮಸೂದೆ ಲೋಕಸಭೆಯಲ್ಲಿ ಪಾಸಾಗಿದ್ದರೂ ಈಗ ರಾಜ್ಯಸಭೆಯಲ್ಲಿ ಪಾಸಾಗದೆ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next