Advertisement

ನಿರ್ಗಮನ ರಾಷ್ಟ್ರಪತಿ ಪ್ರಣವ್‌ ಔತಣಕೂಟದಲ್ಲಿ ಭಾಗವಹಿಸುವ ನಿತೀಶ್‌

03:21 PM Jul 22, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಸಂಜೆ ನಿರ್ಗಮನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಗೌರವಾರ್ಥ ಏರ್ಪಡಿಸಲಿರುವ ಔತಣ ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭಾಗವಹಿಸಲಿದ್ದಾರೆ. 

Advertisement

ನಿತೀಶ್‌ ಅವರು ಸಂಜೆ 4 ಗಂಟೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ನಿತೀಶ್‌ ಅವರು ಸೋನಿಯಾ ಮತ್ತು ರಾಹುಲ್‌ ಜತೆಗೆ ರಾಜ್ಯದಲ್ಲಿನ ಹಾಲಿ ರಾಜಕೀಯ ಸ್ಥಿತಿಗತಿ ಕುರಿತಾಗಿ ಚರ್ಚಿಸುವ ನಿರೀಕ್ಷೆ ಇದೆ. 

ನಿತೀಶ್‌ ಅವರು ಮುಂದಿನ ಮಂಗಳವಾರ ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಭ್ರಷ್ಟಾಚಾರ ಕಳಂಕಿತರಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ರಾಜೀನಾಮೆಗೆ ಒಲ್ಲೆ ಎಂದಿರುವ ಕಾರಣ ಬಿಹಾರದಲ್ಲಿನ ಆಳುವ ಮಹಾ ಘಟಬಂಧನ ಮುರಿದು ಬೀಳುವ ಸಂಭಾವ್ಯತೆಯನ್ನು ತಪ್ಪಿಸಲು ಸೋನಿಯಾ, ರಾಹುಲ್‌ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next