Advertisement

ಗಾಂಧಿ ಹೆಸರಲ್ಲಿ ನಿತೀಶ್‌-ಲಾಲು ಪರಸ್ಪರ ಕೆಸರೆರಚಾಟ

08:20 AM Aug 10, 2017 | Team Udayavani |

ಪಟ್ನಾ: ಮಹಾತ್ಮಾ ಗಾಂಧಿಯ ಹೆಸರನ್ನು ಹೇಳಿಕೊಂಡೇ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರು ಪರಸ್ಪರ ವಾಗ್ಧಾಳಿ ನಡೆಸಿಕೊಂಡ ಘಟನೆ ನಡೆದಿದೆ.

Advertisement

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತ ನಾಡಿದ ಸಿಎಂ ನಿತೀಶ್‌, “ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯ ಈ ಭೂಮಿಗಿದೆ. ಆದರೆ, ದುರಾಸೆಯನ್ನಲ್ಲ ಎಂದು 1942ರ ಆ. 9ರಂದು ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡುವಾಗ ಮಹಾತ್ಮಾ ಗಾಂಧಿ ಅವರು ಹೇಳಿದ್ದರು. ಈಗಲೂ ಹೆಚ್ಚುತ್ತಿರುವ ಇಂಥ ದುರಾಸೆಯನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು. ಈ ಮೂಲಕ ಭ್ರಷ್ಟಾಚಾರ ಆರೋಪ ಹೊತ್ತಿರುವ ಲಾಲು ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ಇದಕ್ಕೆ ಮತ್ತೂಂದು ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ ಲಾಲು ಯಾದವ್‌, “ಗಾಂಧೀಜಿ ಅವರು ದುರಾಸೆ ಕುರಿತು ಸರಿಯಾಗಿಯೇ ಹೇಳಿದ್ದಾರೆ. ಆದರೆ, ರಾಜಕೀಯ ಲಾಲಸೆ ಎನ್ನುವುದು ಭ್ರಷ್ಟಾಚಾರಕ್ಕಿಂತಲೂ ಅಪಾಯಕಾರಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next