Advertisement

ಬಿಹಾರ : ದಲಿತ ಶಕ್ತಿ ಒಗ್ಗೂಡಿಸುವ ಪಾಸ್ವಾನ್‌, ನಿತೀಶ್‌ ಕುಮಾರ್‌

11:18 AM Apr 14, 2018 | Team Udayavani |

ಪಟ್ನಾ : 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಎನ್‌ಡಿಎ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಆಹಾರ ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜತೆಗೂಡಿ ದಲಿತ ಶಕ್ತಿಯನ್ನು ಒಗ್ಗೂಡಿಸುವ ಯತ್ನದಲ್ಲಿ ತೊಡಗಿದ್ದಾರೆ. 

Advertisement

ಆ ಪ್ರಕಾರ ಇಂದು ಶನಿವಾರ ಡಾ. ಭೀಮರಾವ್‌ ಅಂಬೇಡ್ಕರ್‌ ಜನ್ಮ ದಿನದಂದು ಈ ಇಬ್ಬರು ನಾಯಕರು ಪಟ್ನಾದಲ್ಲಿ ಜಂಟಿ ರಾಲಿಯನ್ನು ನಡೆಸಲಿದ್ದಾರೆ. 

ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ಮತ್ತು ಕೇಂದ್ರ ಸಹಾಯಕ ಸಚಿವ ಉಪೇಂದ್ರ ಕುಶವಾಹಾ ಅವರು ಕೂಡ ಈ ರಾಲಿಯಲ್ಲಿ ಭಾಗವಹಿಸಲಿದ್ದಾರೆ. ಲೋಕ ಜನಶಕ್ತಿ (ಎಲ್‌ಜೆಪಿ) ಮತ್ತು ದಲಿತ ಸೇನೆಯ ಜಂಟಿ ಪ್ರಾಯೋಜಕತ್ವದಲ್ಲಿ ಸಭಾ ಕಾರ್ಯಕ್ರಮವು ಬಾಪು ಆಡಿಟೋರಿಯಂ ನಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next