Advertisement

ನಿತೀಶ್‌ ಕುಮಾರ್‌ ಮಾತಿನಿಂದ ಬೇಸರವಾಗಿದೆ ಎಂದ ಋಶ್ವಾಹ

09:42 AM Nov 08, 2018 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಕೇಂದ್ರ ಸಚಿವ ಉಪೇಂದ್ರ ಋಶ್ವಾಹ ರಾಜಕೀಯ ಜಿದ್ದಾಜಿದ್ದಿ ಹೊಸ ರೂಪ ಪಡೆದಿದೆ. ನಿತೀಶ್‌ ಹೇಳಿಕೆಯಿಂದ ನನಗೆ ಬೇಸರವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಋಶ್ವಾಹ ಆಗ್ರಹಿಸಿದ್ದಾರೆ. 2020ರ ವೇಳೆಗೆ ನಿತೀಶ್‌ ಸಿಎಂ ಹುದ್ದೆಯನ್ನು ಇತರರಿಗೆ ಬಿಟ್ಟುಕೊಡಬೇಕು ಎಂದು ಋಶ್ವಾಹ ಹೇಳಿದ್ದಕ್ಕೆ, ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ನಿತೀಶ್‌, ಬಿಹಾರ ಮುಖ್ಯಮಂತ್ರಿ ಹುದ್ದೆಯು ರಸಗುಲ್ಲಾ ಅಲ್ಲ. ನಾನು ಜನರಿಂದ ಆಯ್ಕೆಯಾಗಿದ್ದೇನೆ ಎಂದು ಖಾರವಾಗಿ ಹೇಳಿದ್ದರು. ಈ ಹೇಳಿಕೆ ನನಗೆ ಬೇಸರ ಉಂಟು ಮಾಡಿದೆ ಎಂದು ಋಶ್ವಾಹ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತನ್ನ ರಾಷ್ಟ್ರೀಯ ಲೋಕ ಸಮತಾ ಪಕ್ಷಕ್ಕೆ ಹೆಚ್ಚು ಪಾಲನ್ನು ಎನ್‌ಡಿಎ ಮೈತ್ರಿಕೂಟದಿಂದ ಪಡೆಯಲು ಯತ್ನಿಸುತ್ತಿರುವ ಋಶ್ವಾಹ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಜೊತೆಗೆ ಸಮರಕ್ಕಿಳಿದಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next