Advertisement

ಮ್ಯಾಚ್‌ ಮೊದಲೇ ಫಿಕ್ಸ್‌ ಆಗಿತ್ತು: ಲಾಲು ಯಾದವ್‌

08:25 AM Aug 02, 2017 | Karthik A |

ಪಟ್ನಾ: ತಮ್ಮ ಪಕ್ಷದ ಜತೆಗಿನ ಮೈತ್ರಿ ಕಡಿದುಕೊಂಡು ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಮಂಗಳವಾರ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ನಿತೀಶ್‌ ಎಸಗಿರುವುದು ಮಹಾ ದ್ರೋಹ ಎಂದು ಆರೋಪಿಸಿದ್ದಾರೆ. ‘ನಿತೀಶ್‌ ಮತ್ತು ಬಿಜೆಪಿ ಜತೆ ಮೊದಲೇ ಮ್ಯಾಚ್‌ ಫಿಕ್ಸಿಂಗ್‌ ನಡೆದಿತ್ತು. ತೇಜಸ್ವಿಯಾದವ್‌ ಕೇವಲ ನೆಪ ಮಾತ್ರ. ನಿತೀಶ್‌ ಅವರೊಬ್ಬ ಅವಕಾಶವಾದಿ ಮತ್ತು ಪಲ್ಟಾ ರಾಮ್‌ (ಪಕ್ಷಾಂತರಗಾರ). ತೇಜಸ್ವಿ ರಾಜೀನಾಮೆ ಕೊಟ್ಟಿದ್ದರೂ ನಿತೀಶ್‌ ಬಿಜೆಪಿ ಜತೆಗೆ ಹೋಗುತ್ತಿದ್ದರು’ ಎಂದು ಲಾಲು ಹೇಳಿದ್ದಾರೆ. ಇನ್ನೊಂದೆಡೆ, ಮಂಗಳವಾರ ಮಾತನಾಡಿರುವ ಬಿಹಾರ ಡಿಸಿಎಂ ಸುಶೀಲ್‌ ಮೋದಿ, ‘ಇನ್ನು 3 ದಿನಗಳಲ್ಲಿ ರಾಜ್ಯದ ಮರಳು ಮಾಫಿಯಾ ಜತೆ ಲಾಲುಗಿರುವ ನಂಟನ್ನು ಬಹಿರಂಗಪಡಿಸುತ್ತೇವೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next