Advertisement

ಕೊಡಗಿನಲ್ಲಿ ಕೇಂದ್ರ ಸಚಿವ ಗಡ್ಕರಿ

12:14 AM Jun 10, 2022 | Team Udayavani |

ಮಡಿಕೇರಿ : ಕೇಂದ್ರ ಸರಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಗುರುವಾರ ಕೊಡಗಿಗೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಅವರು ಪುಸ್ತಕ ನೀಡುವ ಮೂಲಕ ಕೇಂದ್ರ ಸಚಿವರನ್ನು ಬರಮಾಡಿಕೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಉಪಸ್ಥಿತರಿದ್ದರು.

Advertisement

ಸಚಿವರ ಖಾಸಗಿ ಪ್ರವಾಸ ಇದಾಗಿದ್ದು, ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಇರಲಿದ್ದಾರೆ. ಯಾವುದೇ ಅಧಿಕೃತ ಕಾರ್ಯಕ್ರಮಗಳಿರುವುದಿಲ್ಲ. ಪಾಲಿಬೆಟ್ಟದ ಥನೀಹುìಲ್ಲಾ ಬಂಗ್ಲೆಯಲ್ಲಿ ಸಚಿವರು ತಂಗಿದ್ದು, ಶುಕ್ರವಾರ ಮಡಿಕೇರಿಯ ತಾಜ್‌ ರೆಸಾರ್ಟ್‌ಗೆ ಆಗಮಿಸಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

ಬಳಿಕ ಜೂ. 13ರಂದು ಮುಂಜಾನೆ ಬೆಂಗಳೂರು ಮಾರ್ಗವಾಗಿ ನಾಗ್ಪುರಕ್ಕೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next