Advertisement

ನಿಥಾರಿ ಕೊಲೆ ಪ್ರಕರಣ: ದೋಷಿಗಳಿಗೆ ಗಲ್ಲು ಶಿಕ್ಷೆ

06:40 AM Jul 25, 2017 | Team Udayavani |

ಗಾಜಿಯಾಬಾದ್‌: ನಿಥಾರಿ ಸರಣಿ ಹತ್ಯೆ ಪ್ರಕರಣದ ದೋಷಿಗಳಾದ ಉದ್ಯಮಿ ಮೋನಿಂದರ್‌ ಸಿಂಗ್‌ ಪಾಂಡೆ ಮತ್ತು ಆತನ ಸಹಾಯಕ ಸುರೀಂದರ್‌ ಕೋಲಿಗೆ ಸಿಬಿಐ ವಿಶೇಷ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮನೆಗೆಲಸದ ಸಹಾಯಕಿ ಪಿಂಕಿ ಸರ್ಕಾರ್‌ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಜತೆಗೆ, ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿದ್ದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. 2006ರ ಡಿಸೆಂಬರ್‌ನಲ್ಲಿ ನೋಯ್ಡಾದ ನಿಠಾರಿಯ ಇಬ್ಬರು ನಿವಾಸಿಗಳು ತಮ್ಮ ಮಕ್ಕಳು ಕಣ್ಮರೆಯಾದ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆ ಕೇಸಿನ ತನಿಖೆ ನಡೆಸಿದ ಪೊಲೀಸರಿಗೆ ಮೋನಿಂದರ್‌ ಸಿಂಗ್‌ ನಿವಾಸದಲ್ಲಿ 19 ಮಂದಿಯ ತಲೆಬುರುಡೆಗಳು ಸಿಕ್ಕಿದ್ದವು. ಸಂತ್ರಸ್ತರಲ್ಲಿ ಬಹುತೇಕರು ಅಪ್ರಾಪ್ತ ವಯಸ್ಸಿನವರಾಗಿದ್ದರು. ಪಾಂಡೆ, ಕೋಲಿ ವಿರುದ್ಧ 19 ಕೊಲೆ ಪ್ರಕರಣಗಳು ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next