Advertisement

ಒಂದು ಜಿಲ್ಲೆ; ಒಂದು ಉತ್ಪನ್ನ ಪ್ರಚಾರ

11:33 PM Aug 25, 2021 | Team Udayavani |

ಮುಂಬಯಿ: ಕೇಂದ್ರ ಸರಕಾರದ “ಒಂದು ಜಿಲ್ಲೆ; ಒಂದು ಉತ್ಪನ್ನ’ ಯೋಜನೆಯನ್ನು ಜನಪ್ರಿಯ ಗೊಳಿಸಲು ಬ್ಯಾಂಕ್‌ಗಳು ಆಯಾ ರಾಜ್ಯ ಸರಕಾರಗಳ ಜತೆಗೆ ಚರ್ಚಿಸಬೇಕು. ಈ ಬಗ್ಗೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಮುಂಬಯಿನಲ್ಲಿ ಮಾತನಾಡಿದ ಅವರು, ರಫ್ತುದಾರರಿಗೆ ಅಗತ್ಯವಾಗಿರುವ ಅಂಶಗಳು ಮತ್ತು ಕೊರತೆ ನಿವಾರಿಸುವ ನಿಟ್ಟಿನಲ್ಲಿ ರಫ್ತು ಉತ್ತೇಜನ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಗಳ ಜತೆಗೆ ಮಾತುಕತೆ ನಡೆಸುವಂತೆಯೂ ಸೂಚಿಸಿದ್ದಾರೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೂಡಿಕೆದಾರರ ವಿಶ್ವಾಸಗಳಿಸಿಕೊಂಡ ಬಳಿಕ 12 ಸಾವಿರ ಕೋಟಿ ರೂ. ಮೊತ್ತ ಸಂಗ್ರಹಿಸುತ್ತಿವೆ.

ರಾಹುಲ್‌ ಗಾಂಧಿಗೆ ಏನು ಗೊತ್ತು? :

“ಸಂಪತ್ತು ಕ್ರೋಡೀಕರಣ ಎಂದರೆ ರಾಹುಲ್‌ ಗಾಂಧಿಗೆ ಏನು ಗೊತ್ತು?’ ಹೀಗೆಂದು ಪ್ರಶ್ನೆ ಮಾಡಿದ್ದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌. ಕಾಂಗ್ರೆಸ್‌ ನೇತೃತ್ವದ ಸರಕಾರದ ಅವಧಿಯಲ್ಲಿಯೇ ದೇಶದ ಸಂಪನ್ಮೂಲ ಗಳನ್ನು ಮಾರಾಟ ಮಾಡಿ, ಲಂಚ ಪಡೆದುಕೊಳ್ಳುತ್ತಿತ್ತು. ಸರಕಾರಿ ಆಸ್ತಿಗಳ ಮೂಲಕ 6 ಲಕ್ಷ ಕೋಟಿ ರೂ.ಮೌಲ್ಯದ ಸಂಪನ್ಮೂಲ ಕ್ರೋಡೀಕರಣಕ್ಕೆ ಕೈಗೊಂಡ ನಿರ್ಧಾರಕ್ಕೆ ರಾಹುಲ್‌ ಗಾಂಧಿ ಟೀಕಿಸಿದ್ದಕ್ಕೆ ವಿತ್ತ ಸಚಿವರು ಈ ಪ್ರಶ್ನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next