Advertisement

ನಿರ್ಭಯಾ ಕೇಸ್; ಗಲ್ಲಿಗೇರುವ ಕೊನೇ ಕ್ಷಣದಲ್ಲಿ ಇಬ್ಬರು ದೋಷಿತರ ಕೊನೆ ಇಚ್ಚೆ ಏನಾಗಿತ್ತು?

11:22 AM Mar 22, 2020 | Nagendra Trasi |

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿತರನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ನೇಣುಗಂಬಕ್ಕೆ ಏರಿಸುವ ಕೆಲವೇ ಕ್ಷಣದ ಮೊದಲು ಮುಖೇಶ್ ಸಿಂಗ್ ಹಾಗೂ ವಿನಯ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು ಎಂದು ದ ಹಿಂದೂ ವರದಿ ಮಾಡಿದೆ.

Advertisement

ನೇಣುಗಂಬಕ್ಕೆ ಏರಿಸುವ ಮೊದಲು ಅಪರಾಧಿ ಮುಖೇಶ್ ಸಿಂಗ್ ತನ್ನ ದೇಹದ ಅಂಗಾಂಗ ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದನಂತೆ. ಮತ್ತೊಬ್ಬ ದೋಷಿ ವಿನಯ್ ಶರ್ಮಾ ತನ್ನ ಪೇಯಿಟಿಂಗ್ ಅನ್ನು ಜೈಲು ಸೂಪರಿಟೆಂಡೆಂಟ್ ಅವರಿಗೆ ಮತ್ತು ಹನುಮಾನ್ ಚಾಲೀಸಾವನ್ನು ಕುಟುಂಬಕ್ಕೆ ನೀಡಬೇಕೆಂದು ತಿಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿನಯ್ ಜೈಲಿನಲ್ಲಿದ್ದಾಗ ಚಿತ್ರ ಬಿಡಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದು, ಉಳಿದ ಇಬ್ಬರು ಯಾವುದೇ ಆಸೆ ವ್ಯಕ್ತಪಡಿಸಿಲ್ಲ ಎಂದು ವರದಿ ಹೇಳಿದೆ.

ಮರಣದಂಡನೆಗೆ ಒಳಗಾದ ವ್ಯಕ್ತಿಗಳಿಗೆ ಕೊನೆಯದಾಗಿ ಏನಾದರೂ ಆಸೆ ಇದೆ ಎಂಬುದು ಕೇಳುವುದು ಸಂಪ್ರದಾಯ. ಈ ಮೊದಲು ನಾಲ್ವರು ಯಾವುದೇ ಇಚ್ಛೆ ವ್ಯಕ್ತಪಡಿಸಿಲ್ಲವಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next