Advertisement

ಮಂಡ್ಯದಲ್ಲಿ ರಂಗೇರಿದ ಕಣ:ಜಿಲ್ಲೆಯಲ್ಲೇ ಮನೆ ಮಾಡುವೆ;ನಿಖಿಲ್‌ 

02:06 PM Mar 03, 2019 | |

ಮಂಡ್ಯ: ಮೈತ್ರಿ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಘೋಷಣೆಯಾಗುವ ಮುನ್ನ ಜೆಡಿಎಸ್‌ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಚುನಾವಣಾ ಕಣ ರಂಗೇರಿದೆ. 

Advertisement

ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರು ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಯತ್ನಿಸುತ್ತಿರುವ ವೇಳೆಯಲ್ಲೇ  ಜೆಡಿಎಸ್‌ನ  ಘೋಷಣೆ ಮೈತ್ರಿಯಲ್ಲಿ ಬಂಡಾಯದ ಸ್ಪಷ್ಟ ಸೂಚನೆ ನೀಡಿದೆ. ಸುಮಲತಾ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಬಿಜೆಪಿ ಅವರಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. 

ಮಂಡ್ಯದಲ್ಲಿ ಭಾನುವಾರ ಮಾತನಾಡಿದ ನಿಖಿಲ್‌, ನಾನು ವರಿಷ್ಠರಿಗೆ ಅಭಾರಿಯಾಗಿದ್ದೇನೆ.ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ನನ್ನ ಹೆಸರು ಘೋಷಿಸಿದ್ದಾರೆ.ಮುಂದಿನ ದಿನಗಳಲ್ಲಿ ಮಂಡ್ಯದಲ್ಲೇ ನಾನು ಮನೆ ಮಾಡುತ್ತೇನೆ ಎಂದು ಹೇಳಿ ಜೆಡಿಎಸ್‌ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. 

ಈ ಬಾರಿ ಮಂಡ್ಯ ಕಣ ಮುಖ್ಯಮಂತ್ರಿ ಪುತ್ರ , ಯುವ ನಾಯಕ ನಿಖಿಲ್‌ ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿರುವ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರ ನಡುವಿನ ಜಿದ್ದಾ ಜಿದ್ದಿನ ಕದನಕ್ಕೆ ಸಾಕ್ಷಿಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next