Advertisement

ನೈಟ್ ಕರ್ಫ್ಯೂ : ಹೋಟೆಲ್ ಮಾಲೀಕರ ಸಂಘ ತೀವ್ರ ಅಸಮಾಧಾನ

03:49 PM Dec 26, 2021 | Team Udayavani |

ಬೆಂಗಳೂರು :ರಾಜ್ಯ ಸರಕಾರ ಜಾರಿ ಗೊಳಿಸಿರುವ ನೈಟ್ ಕರ್ಫ್ಯೂ ಮತ್ತು ಹೊಸ ಮಾರ್ಗ ಸೂಚಿಗಳ ಕುರಿತು ಹೋಟೆಲ್ ಮಾಲೀಕರ ಸಂಘ ಭಾನುವಾರ ತೀವ್ರ ಅಸಮಾಧಾನ ಹೊರ ಹಾಕಿದೆ.

Advertisement

ಹೊಸ ವರ್ಷ ಆಚರಣೆಗೆ ಸರಕಾರ ನಿರ್ಣಯವನ್ನು ತಡವಾಗಿ ತಂದಿದ್ದು, ಈಗಾಗಲೇ ನಾವು ಟಿಕೆಟ್ ಗಳನ್ನೂ ಮಾರಿದ್ದೇವೆ ,ಭಾರಿ ನಷ್ಟವಾಗುತ್ತದೆ, ಎಲ್ಲಾ ಸಿದ್ಧತೆಗಳು ವ್ಯರ್ಥವಾಗುತ್ತದೆ. 10 ಗಂಟೆಯಿಂದ ನೈಟ್ ಕರ್ಫ್ಯೂ ಅನಗತ್ಯ ಮತ್ತು ಅವೈಜ್ಞಾನಿಕ. ಕನಿಷ್ಠ 11-11.30 ರ ಬಳಿಕ ತರಲಿ, ಆಗ ವ್ಯಾಪಾರಕ್ಕೂ ತೊಂದರೆಯಾಗುವುದಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ :ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ : ಸಚಿವ ಸುಧಾಕರ್ ಘೋಷಣೆ

ವ್ಯಾಪಾರ ಸಮೂಹದ ಜೊತೆ ಮಾತನಾಡದೆ ಕೇವಲ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದಾರೆ. ಮುಂದಾದರೂ ಇಂತಹ ನಿರ್ಣಯ ಕೈಗೊಳ್ಳುವ ಮೊದಲು ನಮ್ಮೊಂದಿಗೆ ಸಮಾಲೋಚನೆ ಮಾಡಬೇಕೆಂದು ವಿನಂತಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next