Advertisement

Goa ರೈಲಿನಲ್ಲಿ ನಿಡಿಗಲ್‌ ವಾಸಿಗೆ ಹೃದಯಾಘಾತ: ಸಾವು

01:34 AM Dec 23, 2023 | Team Udayavani |

ಬೆಳ್ತಂಗಡಿ: ಮಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಉಜಿರೆ ಕಾಲೇಜಿನ ಸಂಸ್ಕೃತ ವಿಭಾಗದ ನಿವೃತ್ತ ಮುಖ್ಯಸ್ಥ ದಿ| ಇ. ಮಹಾಬಲ ಭಟ್‌ ಅವರ ಪುತ್ರಚಕಲ್ಮಂಜ ಗ್ರಾಮದ ನಿಡಿಗಲ್‌ನ ಚಂದ್ರಶೇಖರ್‌ ಭಟ್‌ (46) ಮೃತ ವ್ಯಕ್ತಿ.

ರೈಲಿನಲ್ಲಿ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಇವರು ಮಡಂಗಾವ್‌ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದು, ಅವರು ಅಲ್ಲಿ ಇಳಿಯದೆ ಇರುವುದನ್ನು ಗಮನಿಸಿ ಮುಂದಿನ ವರ್ಣ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.

ಅಲ್ಲಿನ ಪೊಲೀಸರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬಸ್ಥರು ಗೋವಾಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next