Advertisement

ತಮಿಳುನಾಡು : ಐದು ಕಡೆ ಎನ್‌ಐಎ ದಾಳಿ

09:53 AM Aug 30, 2019 | Team Udayavani |

ತಮಿಳುನಾಡು: ರಾಷ್ಟ್ರೀಯ ತನಿಖಾ ದಳವು ತಮಿಳುನಾಡಿನ ಕೊಯಮತ್ತೂರಿನ

Advertisement

ಐದು ಕಡೆ ದಿಢೀರ್ ದಾಳಿ ನಡೆಸಿ ಸಂಶಯಾಸ್ಪದ ವ್ಯಕ್ತಿಗಳಿಂದ ಲ್ಯಾಪ್ ಟಾಪ್‌, ಮೊಬೈಲ್, ಪೆನ್ ಡ್ರೈವ್ ಮತ್ತಿತರ ವಿದ್ಯುನ್ಮಾನ ಪರಿಕರಗಳನ್ನು ವಶಪಡಿಸಿಕೊಂಡಿದೆ.

ಸದ್ಯಕ್ಕೆ ಮಾಧ್ಯಮಗಳಿಗೆ ಲಭಿಸಿರುವ ಮಾಹಿತಿಯಂತೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ತಮಿಳುನಾಡಿನ ಪೊಲೀಸರೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಪ್ರಕರಣದ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಎರಡು ದಿನಗಳ ಹಿಂದಷ್ಟೇ ಶ್ರೀಲಂಕಾ ಕಡೆಯಿಂದಲೂ ಲಷ್ಕರ್‌ ತೊಯ್ಬಾ ಉಗ್ರರು ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳಿಗೂ ನಗರಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಎಲ್ಲೆಡೆ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು

ಐಎಸ್ಐ ಪ್ರಭಾವ

Advertisement

ಐಎಸ್ಐ ನ ಪ್ರಭಾವಕ್ಕೆ ಒಳಗಾದವರು ದೇಶದ ವಿವಿಧೆಡೆ ಕಾರ್ಯನಿರತರಾಗಿದ್ದಾರೆ ಎಂಬ ಮಾಹಿತಿ ಹಿಂದೆಯೂ ಲಭ್ಯವಾಗಿತ್ತು. ಕಾಸರಗೋಡಿನಿಂದಲೂ ಹಲವರು ಐಎಸ್ಐ ಗೆ ಸೇರಿದ್ದಾರೆಂಬ ಅಭಿಪ್ರಾಯವೂ ಪ್ರಕಟವಾಗಿದ್ದನ್ನು ಸ್ಮರಿಸಬಹುದು.

ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next