Advertisement

Bengaluru ಸ್ಫೋಟ: ವಿದೇಶಿ ಮಧ್ಯವರ್ತಿ ಬಂಧನ

12:43 AM May 25, 2024 | Team Udayavani |

ಹೊಸದಿಲ್ಲಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಮತ್ತೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದೆ. ಈ ಪ್ರಕ ರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಈಗ ಐದಕ್ಕೇರಿದೆ.

Advertisement

ಬಂಧಿತ ಶಂಕಿತ ಉಗ್ರನನ್ನು ಶೋಯೆಬ್‌ ಅಹ್ಮದ್‌ ಮಿರ್ಜಾ ಅಲಿಯಾಸ್‌ ಚೋಟು ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿ ನಿವಾಸಿ, ಲಷ್ಕರ್‌-ಎ- ತಯ್ಯಬಾ ಉಗ್ರ ಚಟುವಟಿಕೆ ಸಂಚಿನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಂದು ಎನ್‌ಐಎ ಹೇಳಿದೆ.

ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 4 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಮತ್ತೂಬ್ಬ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಿರ್ಜಾ ಹೊಸದಾಗಿ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. 2018ರಲ್ಲಿ ಆತ ವಿದೇಶದಲ್ಲಿರುವ ಶಂಕಿತ ಆನ್‌ಲೈನ್‌ ಹ್ಯಾಂಡ್ಲರ್‌ ಮೂಲಕ ಮುಖ್ಯ ಆರೋಪಿ ಅಬ್ದುಲ್‌ ಮತೀನ್‌ ತಾಹಾನೊಂದಿಗೆ ಸ್ನೇಹ ಸಂಪಾದಿಸಿದ್ದ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಅಬ್ದುಲ್‌ ಮತೀನ್‌ ತಾಹಾ ಹಾಗೂ ವಿದೇಶಿ ಹ್ಯಾಂಡ್ಲರ್‌ ನಡುವೆ ರಹಸ್ಯ ಸಂವಹನ ನಡೆಸಲು ಬಳಸಲಾಗುತ್ತಿದ್ದ ಇಮೈಲ್‌ ಐಡಿಯನ್ನು ಮಿರ್ಜಾನ ತಂದೆ ನೀಡಿದ್ದಾರೆ. ಸಹ ಆರೋಪಿ ಮುಸಾವೀರ್‌ ಹುಸೇನ್‌ ಶಜೀಬ್‌ ಜತೆಗೆ ಅಬ್ದುಲ್‌ ಮತೀನಾ ತಾಹಾನನ್ನು ಎನ್‌ಐಎಯು ಎ. 12ರಂದು ಕೋಲ್ಕತಾದಲ್ಲಿ ಬಂಧಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next