Advertisement

ಮಕ್ಕಳಲ್ಲಿ ತಾರತಮ್ಯ ಮಾಡಬೇಡಿ: ಸಚಿನ್‌ ತೆಂಡುಲ್ಕರ್‌ ಕಿವಿಮಾತು

09:50 AM Jan 01, 2020 | Team Udayavani |

ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಹೊಸ ವರ್ಷಕ್ಕೂ ಮುನ್ನ ದಿನ ದೇಶದ ಎಲ್ಲ ಮಕ್ಕಳಿಗೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಸಚಿನ್‌ ಮಕ್ಕಳ ಬೆಳವಣಿಗೆ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡೆ ಮಾತ್ರ ಕಾರಣವಲ್ಲ. ತಂಡವಾಗಿ ಕೆಲಸ ಮಾಡುವುದು ಹಾಗೂ ಪರಸ್ಪರ ಸಹಾಯ ಮಾಡುವುದನ್ನು ಕಲಿಸಿ ಕೊಡಬೇಕು. ಹೊರಗಿನ ಪ್ರಪಂಚದ ಬಗ್ಗೆ ಜ್ಞಾನ ನೀಡಬೇಕು. ಅವರ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನ ಪಡಬೇಕು. ಮಕ್ಕಳಲ್ಲಿ ಎಂದಿಗೂ ತಾರತಮ್ಯ ಮಾಡಬಾರದು ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವವಾದುದು ಎಂದು ಸಚಿನ್‌ ತೆಂಡುಲ್ಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next