Advertisement

ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ಶೀಘ್ರ ನಿರ್ಮಾಣ: ಸಿಎಂ ಯೋಗಿ

03:33 PM Nov 07, 2018 | Team Udayavani |

ಲಕ್ನೋ : ಅಯೋಧ್ಯೆಯಲ್ಲಿ ಶೀಘ್ರವೇ ನಿರ್ಮಾಣವಾಗಲಿರುವ ಭಗವಾನ್‌ ಶ್ರೀರಾಮನ ಭವ್ಯವಾದ ಮೂರ್ತಿಯು ಉತ್ತರ ಪ್ರದೇಶದ ಅಸ್ಮಿತೆಯಾಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೀಪಾವಳಿಯ ಶುಭ ಪರ್ವದಲ್ಲಿ ಹೇಳಿದ್ದಾರೆ.

Advertisement

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ ಸೇರಿದಂತೆ ಈ ದೇವಳ ನಗರಿಯಲ್ಲಿ  ರಾಮ ಮಂದಿರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪ್ರಕಟಿಸಿದ ಸಿಎಂ ಯೋಗಿ ಅವರು, ಅಯೋಧ್ಯೆಯ ಅಸ್ಮಿತೆಯು ಮರ್ಯಾದಾ ಪುರುಷೋತ್ತಮ ಭಗವಾನ್‌ ಶ್ರೀರಾಮನೊಂದಿಗೆ ಸೇರಿಕೊಂಡಿದೆ ಎಂದು ಫೈಜಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು .

ರಾಮ ಮಂದಿರದ ಒಳಗೆ ಪೂಜಿಸಲ್ಪಡುವ ಒಂದು ವಿಗ್ರಹ ಇರುತ್ತದೆ; ಆದರೆ ಮಂದಿರದ ಹೊರಗೆ ಭವ್ಯವಾದ ಭಗವಾನ್‌ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲಾಗುವುದು; ಅದು ನಮ್ಮ ರಾಜ್ಯ ಉತ್ತರ ಪ್ರದೇಶದ ಅಸ್ಮಿತೆಯಾಗಿರುತ್ತದೆ; ಈ ಯೋಜನೆಗೆ ನಾವೀಗ ಅಂತಿಮ ರೂಪ ಕೊಡುತ್ತಿದ್ದೇವೆ; ಬೇಗನೆ ಅದು ಕಾರ್ಯಗತವಾಗಲಿದೆ; ಮಾತ್ರವಲ್ಲ ಶ್ರೀರಾಮನ ಈ ಭವ್ಯ ಪ್ರತಿಮೆಯು ದೇವಳ ನಗರಿ ಎನಿಸಿಕೊಂಡಿರುವ ಅಯೋಧ್ಯೆಯ ಹೆಮ್ಮೆ ಎನಿಸಿಕೊಳ್ಳಲಿದೆ ಎಂದು ಹೇಳಿದರು. ಹಾಗಿದ್ದರೂ ಸಿಎಂ ಯೋಗಿ ಪ್ರಸ್ತಾವಿತ ಶ್ರೀರಾಮನ ಪ್ರತಿಮೆಯ ಗಾತ್ರ, ಎತ್ತರ, ನಿವೇಶನ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next