Advertisement

ರಾಜೇಂದ್ರ ಸಿಂಗ್‌ ಬಾಬು-ದರ್ಶನ್‌ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ

07:56 AM Jun 11, 2020 | Lakshmi GovindaRaj |

ಸದ್ಯ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾಂಬಿನೇಶನ್‌ನಲ್ಲಿ “ವೀರ ಮದಕರಿ ನಾಯಕ’ ಚಿತ್ರ ತಯಾರಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆಯೇ ಸಿಂಗ್‌ ಬಾಬು ಮತ್ತು ದರ್ಶನ್‌ ಕಾಂಬಿನೇಶನ್‌ ನಲ್ಲಿ ಮತ್ತೊಂದು ಚಿತ್ರ ತಯಾರಾಗುವ ಬಗ್ಗೆಯೂ ಚರ್ಚೆ ಶುರುವಾಗಿದೆ. ಹೌದು, “ವೀರ ಮದಕರಿನಾಯಕ’ ಚಿತ್ರದಲ್ಲಿ ದರ್ಶನ್‌ ಮದಕರಿನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಚಿತ್ರ ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರೊಂದಿಗೆ ದರ್ಶನ್‌ ಮತ್ತೊಂದು ಚಿತ್ರ ಮಾಡಲು ಸಮ್ಮತಿಸಿದ್ದಾರೆ.

Advertisement

ಈ ಬಗ್ಗೆ ಮಾತನಾಡುವ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, “ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಾನು ಮತ್ತು ದರ್ಶನ್‌ “ವೀರ ಮದಕರಿನಾಯಕ’ ಸಿನಿಮಾ ಮಾಡುತ್ತಿದ್ದೇವೆ. ಈ ವೇಳೆ ಹೊಸ ಸಬ್ಜೆಕ್ಟ್‌ ಬಗ್ಗೆ ಅವರಿಗೆ ಹೇಳಿದ್ದು, ಅವರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಸದ್ಯ ವೀರ ಮದಕರಿನಾಯಕ’ ಸಿನಿಮಾ ನಡೆಯುತ್ತಿರುವುದರಿಂದ ನಮ್ಮ ಮೊದಲ ಗಮನ ಈ ಸಿನಿಮಾವನ್ನು ಪೂರ್ಣಗೊಳಿಸುವುದಾಗಿದೆ. ಈ ಸಿನಿಮಾ ಪೂರ್ಣಗೊಂಡು ರಿಲೀಸ್‌ ಆದ ಬಳಿಕವಷ್ಟೇ ಮುಂದಿನ ಸಿನಿಮಾದ ಪ್ಲಾನಿಂಗ್‌ ಶುರುವಾಗಲಿದೆ’ ಎಂದಿದ್ದಾರೆ.

ಇನ್ನು ಬಾಬು ಅವರು ಹೇಳುವಂತೆ, ಈ ಹೊಸಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಐಎಫ್ಎಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವನ್ಯಜೀವಿಗಳ ಅಕ್ರಮ ಬೇಟೆ, ಆಫ್ರಿಕಾ ಖಂಡದ ತಾಂಜೇನಿಯಾದ ಅರಣ್ಯದಲ್ಲಿನ ಬೇಟೆಯ ಹಾವಳಿಗಳ ಕುರಿತಾದ ಪುಸ್ತಕಗಳನ್ನು ಓದುವಾಗ ಅವರಿಗೆ ಇಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ನಿರ್ದೇಶಕ ಬಾಬು ಅವರಿಗೆ ಹೊಳೆದಿದೆಯಂತೆ. ಈ ಹಿಂದೆಯೂ ಇಂಥದ್ದೇ ಕಾಡಿನ ಕುರಿತು ಸಿನಿಮಾಗಳನ್ನು ಮಾಡಿದ್ದರಿಂದ ನಿರ್ದೇಶಕ ಬಾಬು ಅವರಿಗೆ ಈ ವಿಷಯವನ್ನು ತೆರೆಮೇಲೆ ತರಬಹುದು ಎಂದು ಅನಿಸಿದ್ದರಿಂದ, ಈ ಸಿನಿಮಾ ಮಾಡಲು ಬಾಬು ಮುಂದಾಗಿದ್ದಾರಂತೆ.

ಇದೊಂದು ಅಂತರಾಷ್ಟ್ರೀಯ ಕಥಾಹಂದರದ ಜಾಗತಿಕ ವಿಷಯವಾಗಿರುವುದರಿಂದ, ಆಫ್ರಿಕಾ, ಹಾಂಕಾಂಗ್‌ ಮತ್ತು ಲಂಡನ್‌ ಮೊದಲಾದ ಕಡೆಗಳಲ್ಲಿ ಚಿತ್ರಕಥೆ ಸಾಗಲಿದೆಯಂತೆ. ಹಾಗಾಗಿ ಆಫ್ರಿಕಾದ ಕಾಡುಗಳು ಸೇರಿದಂತೆ ವಿದೇಶದ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆಯಂತೆ. ಒಟ್ಟಾರೆ ದರ್ಶನ್‌ ಖಡಕ್‌ ಐಎಫ್ಎಸ್‌ ಆಫೀಸರ್‌ ಆಗಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ಈ ಸಿನಿಮಾ ದರ್ಶನ್‌ ಅವರ ಅಭಿಮಾನಿಗಳಿಗೆ ಭರಪೂರ ಆಕ್ಷನ್‌ ಮನರಂಜನೆ ನೀಡುವು ಪಕ್ಕಾ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next