Advertisement

ಬಿಜೆಪಿ ರೈತ ವಿರೋಧಿ ಪಕ್ಷ

05:06 PM Dec 09, 2020 | Suhan S |

ಚಾಮರಾಜನಗರ: ಕಾಂಗ್ರೆಸ್‌ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಎಲ್ಲಾ ವರ್ಗದವರಿಗೆ ಅಧಿಕಾರ ನೀಡುವ ಸಲುವಾಗಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿ ಮಾಡಿತ್ತು ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ ತಿಳಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಮಾತನಾಡಿದರು.

ಸಾಮಾಜಿಕ ನ್ಯಾಯ: ಕಾಂಗ್ರೆಸ್‌ ದೇಶದ ಅಭಿವೃದ್ಧಿ ಬಯಸಿ ಸ್ವಾತಂತ್ರ್ಯ ಪೂರ್ವದಲ್ಲಿ ಉದಯವಾದ ಪಕ್ಷವಾಗಿದೆ. ಸಾಮಾಜಿಕ ನ್ಯಾಯದಡಿ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿ ಶೋಷಿತ ಸಮಾಜಗಳ ಅಭಿವೃದ್ಧಿ ಬಯಸಿ ರಾಜಕಾರಣ ಮಾಡುತ್ತಿದೆ ಎಂದರು. ಅಧಿಕಾರ ವಿಕೇಂದ್ರಿಕರಣ: ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮ ಮಟ್ಟದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಬೇಲೂರುಘೋಷಣೆ ಮಾಡಿತ್ತು. ಇದರ ಪರಿಣಾಮ ದೆಹಲಿಯಿಂದ ಹಳ್ಳಿಗೆ ನೇರವಾಗಿ ಅನುದಾನ ಹಾಗೂ ಯೋಜನೆಗಳು ಜಾರಿಯಾಗಲು, ಕಾಂಗ್ರೆಸ್‌ ನಾಯಕರ ದೂರದೃಷ್ಟಿತ್ವ ರಾಜಕಾರಣ ಅಭಿವೃದ್ಧಿಗೆ ಪೂರಕವಾಗಿದೆ. ಬಡವರು ಹಾಗೂ ರೈತರ ವಿರೋಧಿ ಪಕ್ಷ ಬಿಜೆಪಿ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್‌ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ಅಭಿನಂದನೆಗಳು. ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮುಂಬರುವ ಚುನಾವO ಗಳಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬುವಕೆಲಸ ಮಾಡಬೇಕು ಎಂದರು.

ಸೇರ್ಪಡೆಯಾದವರು: ತಾಲೂಕಿನ ಹೆಬ್ಬಸೂರು ಗ್ರಾಪಂಗೆ ಅರಳೀಪುರ ಗ್ರಾಮದ ಬಿಜೆಪಿ, ಬಿಎಸ್ಪಿ ಮುಖಂಡರಾದ ವಸಂತಗೋವಿಂದರಾಜು, ಮಹೇಶ್‌ಕುಮಾರ್‌, ಪುಟ್ಟಸ್ವಾಮಿ, ಮಹಾಲಿಂಗ, ಕಿರಣ್‌, ಮನುಮೋಹನ್‌, ರಾಘವೇಂದ್ರ, ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಬ್ಲಾಕ್‌ ಅಧ್ಯಕ್ಷ ಎ.ಎಸ್‌.ಗುರುಸ್ವಾಮಿ, ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌, ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಎನ್‌.ಪಿ. ನಾಗಾರ್ಜುನ ಪೃಥ್ವಿ, ಮುಖಂಡರಾದ ಎಚ್‌.ಎನ್‌. ಖಾನ್‌, ಹೆಬ್ಬಸೂರು ರಂಗಸ್ವಾಮಿ, ವೀರಭದ್ರಸ್ವಾಮಿ, ಉಮೇಶ್‌, ಬಸವಣ್ಣ, ಮುದ್ದಯ್ಯ, ಚಿನ್ನ ಸ್ವಾಮಿ, ಶೇಖರ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next