Advertisement

Kannada Serial; ಪ್ರೀತಿ ಕಥೆ ‘ಅವನು ಮತ್ತೆ ಶ್ರಾವಣಿ’; ಮುಖ್ಯ ಪಾತ್ರದಲ್ಲಿ ಶ್ವಾನ

05:56 PM Oct 02, 2023 | Team Udayavani |

ಹೊಸದೊಂದು ಲವ್‌ ಸ್ಟೋರಿಯನ್ನು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಲು ಸಜ್ಜಾಗಿದೆ. ಅದು ಅವನು ಮತ್ತು ಶ್ರಾವಣಿ.

Advertisement

ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿ ವಾಸವಾಗಿರ್ತಾಳೆ. 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಭಾರತಕ್ಕೆ ಬರುತ್ತಾಳೆ. ತಾನು ಪ್ರೀತಿಸಿ ಮದುವೆಯಾಗಿ ವಿಚ್ಛೇದನ ಪಡೆದ ಅಭಿಮನ್ಯು, ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಶ್ರಾವಣಿಗೆ ತಿಳಿಯುತ್ತದೆ. ವರ್ಷಗಳ ಬಳಿಕ ಇವರಿಬ್ಬರು ಮುಖಾಮುಖಿಯಾಗ್ತಾರೆ.

ಇನ್ನು ಈ ಕತೆಯಲ್ಲಿ ಇನ್ನೊಂದು ಮುಖ್ಯಪಾತ್ರ ನಿರ್ವಹಿಸುತ್ತಿರುವುದು “ಚೀಕು’ ಎಂಬ ನಾಯಿ. ಮಗುವಿನಂತಿರುವ ಈ ನಾಯಿ ಅಭಿಮನ್ಯು ಹಾಗು ಶ್ರಾವಣಿಯನ್ನು ಮತ್ತೆ ಹೇಗೆ ಒಂದು ಮಾಡುತ್ತದೆ? ಈ ಪ್ರೇಮಿಗಳಿಬ್ಬರು ದೂರವಾಗಲು ಕಾರಣವಾದರೂ ಏನು? ಈ ಎರಡಕ್ಷರದ ಪ್ರೀತಿಗೆ.. ಸಿಗಲಿದೆಯೇ ಎರಡನೇ ಅವಕಾಶ ? ಅನ್ನೋದೇ “ಅವನು ಮತ್ತೆ ಶ್ರಾವಣಿ’ ಧಾರಾವಾಹಿಯ ಮುಖ್ಯ ಕಥಾ ಹಂದರ.

ಇನ್ನು ಈ ಧಾರಾವಾಹಿಯ ಅಶೋಕ್‌, ನಾಯಕಿಯಾಗಿ ಅನುಷಾ ರಮೇಶ್‌ ಅಭಿನಯಿಸುತ್ತಿದ್ದಾರೆ.”ಅವನು ಮತ್ತೆ ಶ್ರಾವಣಿ’ ಇದೇ ಅಕ್ಟೋಬರ್‌ 2ರಿಂದ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next