Advertisement

ಅಯೋಧ್ಯೆಯಲ್ಲಿ ಬೆಳಕಿನ ಚಿತ್ತಾರ

10:03 AM Oct 28, 2019 | mahesh |

ಲಕ್ನೋ: ದೇಶಾದ್ಯಂತ ದೀಪಾವಳಿಯ ಸಂಭ್ರಮ ಮನೆಮಾಡಿರುವಂತೆಯೇ ದೇಗುಲಗಳ ನಗರಿ ಅಯೋಧ್ಯೆಯು ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. 3 ದಿನಗಳ ಕಾಲ ನಡೆಯಲಿರುವ ಅದ್ದೂರಿ ದೀಪೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ದೀಪದ ಬೆಳಕು ಮುದ ನೀಡುತ್ತಿದೆ.

Advertisement

ಅಯೋಧ್ಯೆ ನಗರಾದ್ಯಂತ 5 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ತಾವೇ ಮಾಡಿದ ಹಿಂದಿನ ದಾಖಲೆಯನ್ನು ಸರಿಗಟ್ಟಿ, ಹೊಸದಾಗಿ ಗಿನ್ನೆಸ್‌ ದಾಖಲೆಯಲ್ಲಿ ಹೆಸರು ಪಡೆಯಲು ಉತ್ತರ ಪ್ರದೇಶ ಸರಕಾರ ಉದ್ದೇಶಿಸಿದೆ. 2017ರಲ್ಲಿ ಉ.ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ಆ ವರ್ಷದಿಂದಲೇ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ. ಇದು 3ನೇ ವರ್ಷದ ಕಾರ್ಯ ಕ್ರಮವಾಗಿದ್ದು, ಸದ್ಯದಲ್ಲೇ ಅಯೋಧ್ಯೆ ತೀರ್ಪು ಬರುವ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಇತ್ತ ನೆಟ್ಟಿದೆ. 3 ದಿನಗಳ ಕಾಲ ದೀಪೋತ್ಸವ ನಡೆಯಲಿದ್ದು, ಶನಿವಾರದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫಿಜಿ ಸಂಸತ್‌ನ ಡೆಪ್ಯುಟಿ ಸ್ಪೀಕರ್‌ ವೀಣಾ ಭಟ್ನಾಗರ್‌ ಪಾಲ್ಗೊಂಡಿದ್ದಾರೆ.

ವಿದೇಶಿ ಗಣ್ಯರು ಭಾಗಿ
ಥಾಯ್ಲೆಂಡ್‌ನ‌ ಥಾಯ್‌-ಇಂಡಿಯಾ ಕಲ್ಚರ್‌ ಲಾಡ್ಜ್ನ ಅಧ್ಯಕ್ಷರು, ಮಾರಿಷಿಯಸ್‌ನ ರಾಮಾಯಣ ಸೆಂಟರ್‌ನ ಸ್ಥಾಪಕರು, ಚೀನ, ನೇಪಾಲ ಮತ್ತಿತರ ದೇಶಗಳ ರಾಮಾಯಣ ತಜ್ಞರು ಮತ್ತಿತರ ಗಣ್ಯರು ದೀಪೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.

ಗಿನ್ನೆಸ್‌ ದಾಖಲೆ
ಹಿಂದಿನ ದಾಖಲೆಹಿಂದಿನ ದಾಖಲೆ 3,51,000 ದೀಪಗಳು
ಈ ಬಾರಿ 5,51,000 ದೀಪಗಳು

Advertisement

Udayavani is now on Telegram. Click here to join our channel and stay updated with the latest news.

Next