Advertisement

ನೂತನ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಆಯ್ಕೆ: ಎಡನೀರು ಶ್ರೀ ಸಂತಸ

09:52 AM Jul 28, 2021 | Team Udayavani |

ಕಾಸರಗೋಡು: ಬಸವರಾಜ ಬೊಮ್ಮಾಯಿಯವರು ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿರುವುದು ಸಂತೋಷದ ವಿಷಯ ಎಂದು ಎಡನೀರು ಶ್ರೀ ತಿಳಿಸಿದ್ದಾರೆ.

Advertisement

ಗಡಿನಾಡು ಕಾಸರಗೋಡಿನ ಜನರ ಮೇಲೂ ಅಪಾರವಾದ ಪ್ತೀತಿ ಹಾಗೂ ಗೌರವ ಭಾವವನ್ನು ಹೊಂದಿದ್ದ ಅವರು ಕರ್ನಾಟಕ ಗೃಹ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೇರಳದ ಶಂಕರ ಪರಂಪರೆಯ ಏಕೈಕ ಮಠವಾದ ಶ್ರೀ ಎಡನೀರು ಮಠಕ್ಕೆ ಭೇಟಿಯಿತ್ತಿದ್ದರು ಎಂಬುದನ್ನು  ಶ್ರೀಮದ್ಜಗದ್ಗರು ಶಂಕರಾಚಾರ್ಯರ ತೋಟಕಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನೆನಪಿಸಿಕೊಂಡರು.  ಮಾತ್ರವಲ್ಲದೆ ನಿಷ್ಠಾವಂತ ರಾಜಕಾರಣಿ ಮುಖ್ಯಮಂತ್ರಿ ಸ್ಥಾನ ಪಡೆದುದಕ್ಕೆ ಸಂತಸ ವ್ಯಕ್ತಪಡಿಸಿದರು.

ಗೃಹ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇತ್ತೀಚೆಗೆ ಬೊಮ್ಮಾಯಿಯವರು ಮಠ ಸಂದರ್ಶಿಸಿ ಆಶೀರ್ವಾದ ಪಡೆದುಕೊಂಡಿದ್ದರು.   ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅವರಿಗೆ ಶಾಲು ಹೊದಿಸಿ ಗೌರವಿಸಿ ಮುಂದಿನ ಬಾರಿ ಶ್ರೀ ಮಠಕ್ಕೆ ಬರುವಾಗ ಇನ್ನೂ ಉನ್ನತ ಹುದ್ದೆ, ಸ್ಥಾನ ಮಾನ ಹೊಂದುವಂತೆ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ಸ್ವಾಮಿಯು ಅನುಗ್ರಹಿಸಲಿ ಎಂದು ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ‌

ಶ್ರೀ ಮಠಕ್ಕೆ ಭೇಟಿ ನೀಡಿದ ಆನಂದವನ್ನು ಬಸವರಾಜ ಬೊಮ್ಮಾಯಿಯವರು ಅಂದು ಜಾಲತಾಣದಲ್ಲೂ ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next