Advertisement

ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ವರ್ಗ ಎಚ್‌. ಪ್ರಸನ್ನ ನೂತನ ಸಿಇಒ

11:52 PM May 05, 2022 | Team Udayavani |

ಉಡುಪಿ : ಉಡುಪಿ ಜಿ.ಪಂ. ಸಿಒಇ ಡಾ| ವೈ. ನವೀನ್‌ ಭಟ್‌ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದ್ದು, ನೂತನ ಸಿಇಒ ಆಗಿ ಎಚ್‌. ಪ್ರಸನ್ನ ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Advertisement

ನವೀನ್‌ ಭಟ್‌ ಅವರನ್ನು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಕೊರೊನಾ ಅವಧಿಯಲ್ಲಿ ಉತ್ತಮ ನಿರ್ವಹಣೆ ಮಾಡಿರುವ ಜತೆಗೆ ಜಿಲ್ಲೆಯ ನರೇಗಾದಡಿ ಮಾನವ ದಿನ ಸೃಜನೆಯಲ್ಲಿ ನಿರ್ದಿಷ್ಟ ಗುರಿಗಿಂತಲೂ ಅಧಿಕ ಸಾಧನೆ ಮಾಡುವಲ್ಲಿ ಡಾ| ಭಟ್‌ ಯಶಸ್ವಿಯಾಗಿದ್ದರು. ಉತ್ತಮ ಕಾರ್ಯನಿರ್ವಹಣೆಗೆ ಪಂಚಾಯತ್‌ ರಾಜ್‌ ದಿನಾಚರಣೆಯಂದು ಮುಖ್ಯಮಂತ್ರಿಯವರಿಂದ ಪ್ರಶಸ್ತಿ ಪಡೆದಿದ್ದರು.

ಎಚ್‌. ಪ್ರಸನ್ನ ಅವರು ಕೆಎಎಸ್‌ ಅಧಿಕಾರಿಯಾಗಿದ್ದು ಇತ್ತೀಚೆಗೆ ಐಎಎಸ್‌ ಅಧಿಕಾರಿಯಾಗಿ ಭಡ್ತಿ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ದಿಲ್ಲಿಯ ಕರ್ನಾಟಕ ಭವನದಲ್ಲಿ ಉಪ ವಸತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಉಕ್ರೇನ್‌ನಿಂದ ಭಾರತಕ್ಕೆ ಬಂದಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ದಿಲ್ಲಿ ಭವನದಲ್ಲಿ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ಕರ್ನಾಟಕಕ್ಕೆ ಬರಲು ಅಗತ್ಯವಾದ ಸಹಕಾರ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next