Advertisement

ವಸತಿ ಯೋಜನೆ ಅವ್ಯವಹಾರ ತಡೆಗೆ ಹೊಸ ಕ್ರಮ: ಸೋಮಣ್ಣ

10:26 AM Jan 09, 2020 | Lakshmi GovindaRaj |

ಮಂಗಳೂರು: ವಸತಿ ಯೋಜನೆಗಳಲ್ಲಿ ಅವ್ಯಹಾರ ಆಗದಂತೆ ತಡೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಒಪ್ಪಿಗೆ ನೀಡಿದ ಮನೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಪಂ ಕಾರ್ಯನಿರ್ವಹಣಾ ಧಿಕಾರಿಗಳು, ಪಿಡಿಒ ಗಳು ಹಾಗೂ ಸ್ಥಳೀಯ ಶಾಸಕರು ಸೇರಿ ಹಂಚಿಕೆಯಾದ ಮನೆಗಳನ್ನು ಪರಿಶೀಲಿಸಿ ಅವರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿಪಂ ಸಿಇಒಗೆ ಕಳು ಹಿಸಲು ನಿರ್ದೇಶಿಸಲಾಗಿದೆ. ಸಿಇಒ ಒಪ್ಪಿಗೆ ದೊರೆತ ಮನೆಗಳಿಗೆ ಅನುದಾನ ನೀಡಲಾಗುವುದು. ಮುಂದಿನ 15 ದಿನಗಳೊಳಗೆ ಈ ಪ್ರಕ್ರಿಯೆ ನಡೆಯಬೇಕು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.

ವಸತಿ ಯೋಜನೆಗೆ ಆ್ಯಪ್‌: ಮನೆ ಹಂಚಿಕೆಯಾದ ಪ್ರದೇಶ, ಅವುಗಳ ನಿರ್ಮಾಣ ಹಂತ ಸೇರಿದಂತೆ ಪ್ರತಿಯೊಂದನ್ನು ತಿಳಿಯುವ ನಿಟ್ಟಿನಲ್ಲಿ ವಸತಿ ಯೋಜನೆಯನ್ನು ಆ್ಯಪ್‌ ಮೂಲಕ ನಿರ್ವಹಿಸುವ ಉದ್ದೇಶವಿದೆ. ಇದರ ಅನುಷ್ಠಾನದ ಜವಾಬ್ದಾರಿಯನ್ನು ನಗರದಲ್ಲಿ ಜಿಲ್ಲಾಧಿಕಾರಿ, ಗ್ರಾಮಾಂತ ರದಲ್ಲಿ ಜಿಪಂ ಸಿಇಒಗೆ ವಹಿಸಲು ನಿರ್ಧರಿಸಿದ್ದು, ಮಾರ್ಚ್‌ ವೇಳೆಗೆ ಯೋಜನೆ ರೂಪುಗೊಳ್ಳಲಿದೆ ಎಂದರು.

2.50 ಲಕ್ಷ ರೂ. ಬೇಡಿಕೆ: ಪ್ರಸ್ತುತ ವಿವಿಧ ವಸತಿ ಯೋಜನೆಗಳಿಂದ ಪ್ರತಿ ಮನೆಗೆ ರಾಜ್ಯದ 70 ಸಾವಿರ ರೂ. ಹಾಗೂ ಕೇಂದ್ರದ 50 ಸಾವಿರ ರೂ. ಸೇರಿ ಒಟ್ಟು 1.20 ಲಕ್ಷ ರೂ. ನೀಡಲಾಗುತ್ತಿದೆ. ಈ ಮೊತ್ತ ಸಾಲದು ಎಂದು ಮನಗಂಡು ಪ್ರತಿ ಮನೆಗಳಿಗೆ ಕನಿಷ್ಠ 2.5 ಲಕ್ಷ ರೂ. ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗುವುದು. ಪ್ರಸ್ತುತ 4 ಕಂತುಗಳಲ್ಲಿ ಬಿಡುಗಡೆಯಾಗುವ ಹಣವನ್ನು 2 ಕಂತುಗಳಿಗೆ ಇಳಿಸುವ ಉದ್ದೇಶವಿದೆ ಎಂದು ಸಚಿವ ಸೋಮಣ್ಣ ತಿಳಿದರು.

Advertisement

Udayavani is now on Telegram. Click here to join our channel and stay updated with the latest news.

Next