Advertisement

ಗುರಿಯಿಂದ ವಿಚಲಿತರಾಗದಿರಿ: ಮೋದಿ

08:12 PM Mar 17, 2022 | Team Udayavani |

ಡೆಹ್ರಾಡೂನ್‌: “ಭಾರತವನ್ನು ಆಧುನಿಕ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಎಂದಿಗೂ ಕಳೆದುಕೊಳ್ಳಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಐಎಎಸ್‌ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Advertisement

ಗುರುವಾರ ಉತ್ತರಾಖಂಡದ ಡೆಹ್ರಾಡೂನ್‌ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಪ್ರಶಾಸನ ಅಕಾಡೆಮಿಯ ಐಎಎಸ್‌ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ನಿಮ್ಮ ಸೇವೆ ಮತ್ತು ಕೆಲಸದ ಪ್ರಜ್ಞೆಯನ್ನು ಎಂದೂ ಮರೆಯಬಾರದು. ಅವೆರಡನ್ನು ಬಿಟ್ಟು ಅಧಿಕಾರದ ಬಗ್ಗೆ ಯೋಚನೆ ಮಾಡಿದರೆ ವೈಯಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ಹಾನಿಯಾಗುತ್ತದೆ. ದೇಶವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಧ್ಯೇಯವಾಕ್ಯವನ್ನು ಹೊಂದಿರಬೇಕು ಎನ್ನುವುದನ್ನು ನೀವು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next