Advertisement

ಭಾರತ ಮೂಲಕ ವಿದೇಶಕ್ಕೆ ಹೋಗುವ ನೇಪಾಲಿಗಳಿಗೆ ವಲಸೆ ಇಲಾಖೆಯ ಎನ್‌ಓಸಿ ಅಗತ್ಯ

09:01 AM May 17, 2019 | Team Udayavani |

ಕಾಠ್ಮಂಡು : ಭಾರತದ ಮೂಲಕ ವಿದೇಶಕ್ಕೆ ಹಾರಲು ಬಯಸುವ ನೇಪಾಲಿ ಪ್ರಜೆಗಳು ಭಾರತದ ಒಳವಲಸೆ ಅಧಿಕಾರಿಗಳಿಂದ ಅನುಮತಿ ಪಡೆಯುವುಕ್ಕಾಗಿ ಈಗಿನ್ನು ಹೊಸದಿಲ್ಲಿಯಲ್ಲಿನ ನೇಪಾಲಿ ದೂತಾವಾಸದಿಂದ ನಿರಾಕ್ಷೇಪಣ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಇಂದು ಹೊರಡಿಸಿರುವ ನೋಟಿಸ್‌ ತಿಳಿಸಿದೆ.

Advertisement

ಅರ್ಜಿದಾರರು ನೇಪಾಲಿ ದೂತಾವಾಸಕ್ಕೆ ಅರ್ಜಿಯನ್ನು ಸಲ್ಲಿಸಿ ತಾವು ವಿದೇಶ ಪ್ರಯಾಣ ಕೈಗೊಳ್ಳುವ ಕಾರಣವನ್ನು ತಿಳಿಸಬೇಕಾಗುತ್ತದೆ; ಜತೆಗೆ ತಮ್ಮ ದೇಶದ ವೀಸಾವನ್ನು, ಪಾಸ್‌ ಪೋರ್ಟ್‌ ಪ್ರತಿಯೊಂದನ್ನು, ಏರ್‌ ಟಿಕೆಟ್‌ ಮತ್ತು ಭಾರತ ಹೊರತು ಪಡಿಸಿ ಈ ಹಿಂದಿನ ಪ್ರಯಾಣ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಉದ್ಯೋಗದ ಉದ್ದೇಶದಲ್ಲಿ ವಿದೇಶ ಪ್ರಯಾಣ ಕೈಗೊಳ್ಳುವವರು ವಿದೇಶಿ ಉದ್ಯೋಗ ಇಲಾಖೆಯಿಂದ ಪಡೆಯಲಾದ ಉದ್ಯೋಗ ಪರವಾನಿಗೆ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ಹೊಸದಿಲ್ಲಿಯಲ್ಲಿನ ನೇಪಾಲಿ ದೂತಾವಸ ಹೊರಡಿಸಿರುವ ಪ್ರಕಟನೆಯನ್ನು ಉಲ್ಲೇಖೀಸಿ ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next