Advertisement

India ಸಂಬಂಧ ಕುರಿತು ಹೇಳಿಕೆ ವಿವಾದ; ನೇಪಾಳ ಪ್ರಧಾನಿ ರಾಜೀನಾಮೆಗೆ ಒತ್ತಡ

04:12 PM Jul 06, 2023 | Team Udayavani |

ಕಾಠ್ಮಂಡು: ”ಭಾರತದ ಉದ್ಯಮಿಯೊಬ್ಬರು ಇಲ್ಲಿ ನೆಲೆಸಿ ನನ್ನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಪ್ರಯತ್ನಗಳನ್ನು ಮಾಡಿದರು” ಎಂಬ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಪ್ರತಿಪಕ್ಷಗಳು ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

Advertisement

”ರೋಡ್ಸ್ ಟು ವ್ಯಾಲಿ: ದಿ ಲೆಗಸಿ ಆಫ್ ಸರ್ದಾರ್ ಪ್ರೀತಮ್ ಸಿಂಗ್ ಇನ್ ನೇಪಾಳ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಪ್ರತಿಪಕ್ಷಗಳಿಗೆ ಆಹಾರವಾಗಿದೆ.

”ನೇಪಾಳದ ಪ್ರವರ್ತಕ ಟ್ರಕ್ಕಿಂಗ್ ಉದ್ಯಮಿ ಸರ್ದಾರ್ ಪ್ರೀತಮ್ ಸಿಂಗ್ ನೇಪಾಳ-ಭಾರತ ಸಂಬಂಧಗಳನ್ನು ಹೆಚ್ಚಿಸುವಲ್ಲಿ ವಿಶೇಷ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ.  ಸಿಂಗ್ ಅವರು ಹಲವಾರು ಬಾರಿ ದೆಹಲಿಗೆ ಪ್ರಯಾಣಿಸಿದರು ಮತ್ತು ನನ್ನನ್ನು ಪ್ರಧಾನಿ ಮಾಡಲು ಕಾಠ್ಮಂಡುವಿನಲ್ಲಿ ರಾಜಕೀಯ ನಾಯಕರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಿದರು.” ಎಂದು ಪ್ರಧಾನಿ ಪ್ರಚಂಡ ಹೇಳಿದ್ದರು.

ನೇಪಾಳದ ವಿಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ ಸೇರಿ ಹಲವು ಪಕ್ಷಗಳು ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ”ಹೊಸದಿಲ್ಲಿಯಿಂದ ನೇಮಕಗೊಂಡ ಪ್ರಧಾನಿಗೆ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ” ಎಂದು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next