Advertisement

ನೆಲ್ಯಾಡಿಯಲ್ಲಿ ಪೋಡಿ ಮುಕ್ತ  ಗ್ರಾಮ ಅಭಿಯಾನ 

04:52 PM Nov 20, 2017 | |

ನೆಲ್ಯಾಡಿ: ಸರಕಾರದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಸೂಚಿಯಾದ ‘ಪೋಡಿ ಮುಕ್ತ ಗ್ರಾಮ ಅಭಿಯಾನ’ವು ನೆಲ್ಯಾಡಿಯ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

Advertisement

ನೆಲ್ಯಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸರಕಾರವು ಗ್ರಾಮೀಣ ಪ್ರದೇಶದ ಪಟ್ಟಾದಾರರಿಗೆ ಬಹುಕಾಲದಿಂದ ಕಂದಾಯ ದಾಖಲೆಯಲ್ಲಿರುವ ಲೋಪ ದೋಷಗಳನ್ನು ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೇ ಸರಿಪಡಿಸಿ ಕೊಳ್ಳಬಹುದಾದ ವ್ಯವಸ್ಥೆಯನ್ನು ಈ ಪೋಡಿ ಮುಕ್ತ ಗ್ರಾಮ ಅನ್ನುವ ಕಾರ್ಯಸೂಚಿಯ ಮೂಲಕ ಸರಳೀಕರಣಗೊಳಿಸಿದೆ. ಇದರ ಉಪಯೋಗವನ್ನು ಗ್ರಾಮದ ಎಲ್ಲ ಜನರು ಪಡಕೊಳ್ಳುವಂತಾಗಲೀ ಎಂದರು.

ಪುತ್ತೂರು ತಾ| ಸರ್ವೇ ಇಲಾಖೆಯ ಎಡಿಎಲ್‌ಆರ್‌ ಭೈರಪ್ಪ ಮಾತನಾಡಿ, ಪೂರ್ವ ನಿಗದಿಯಂತೆ ಇಂದಿನಿಂದ ನೆಲ್ಯಾಡಿ ಗ್ರಾಮದಲ್ಲಿ ಪೋಡಿ ಮುಕ್ತ ಅಭಿಯಾನ ಆರಂಭಿಸುತ್ತಿದ್ದೇವೆ. ಇಂದು ಮಾಹಿತಿಯನ್ನು ಪಡಕೊಳ್ಳದ ಗ್ರಾಮಸ್ಥರು ಬಹುತೇಕ ಇದ್ದರೂ ಅವರು ತಮ್ಮ ಸಮಸ್ಯೆಗಳನ್ನು ಗ್ರಾ. ಪಂ. ಕಚೇರಿಗೆ ಬಂದು ತಿಳಿಸಿದಲ್ಲಿ ಇದನ್ನು ಸರಿಪಡಿಸಿಕೊಡಲಾಗುವುದು ಎಂದರು. ಸರ್ವೆ ಇಲಾಖೆಯ ಸೂಪರ್‌ವೈಸರ್‌ ಸಿ.ಕೆ. ಮಂಜುನಾಥ್‌, ನೆಲ್ಯಾಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ದೇವರಾಜ್‌, ಸರ್ವೇಯರ್‌ ಉದಯ ಕುಮಾರ್‌, ನೆಲ್ಯಾಡಿ ಗ್ರಾಮಕರಣಿಕೆ ಅಶ್ವಿ‌ನಿ ಮೊದಲಾದವರು ಉಪಸ್ಥಿತರಿದ್ದರು. 

ಮಹತ್ವಾಕಾಂಕ್ಷಿ ಯೋಜನೆ
ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಡಿ ಮುಕ್ತ ಗ್ರಾಮ. ಇದರ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ಕಾರ್ಯ ಇನ್ನೂ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಪಟ್ಟಾದಾರರ ಹಳೆಯ ಕಂದಾಯ ಸಮಸ್ಯೆಗಳಾದ ಗಡಿ ಗುರುತು ತಕರಾರು, ಹಿಂದಿನಿಂದಲೂ ಗಡಿಯಲ್ಲಿರುವ ಗೊಂದಲಗಳನ್ನು ಗ್ರಾಮಮಟ್ಟದಲ್ಲಿ ಸ್ವತಃ ಸರ್ವೇ ಇಲಾಖೆಯವರೇ ಬಂದು ಪ್ಲಾಟಿಂಗ್‌ ಮೂಲಕ ಸರಿಪಡಿಸಲು ಇರುವ ಅತೀ ಅಗತ್ಯದ ಯೋಜನೆಯಾಗಿದೆ ಎಂದು ತಾಲೂಕು ಪಂಚಾಯತ್‌ ಸದಸ್ಯೆ ಉಷಾ ಅಂಚನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next