Advertisement

Jairam Ramesh: “ನೆಹರೂ ಪರಂಪರೆ ಅಳಿವು ಮೋದಿ ಅಜೆಂಡಾ”: ಜೈರಾಮ್‌ ರಮೇಶ್‌ 

12:30 AM Aug 17, 2023 | Team Udayavani |

ಹೊಸದಿಲ್ಲಿ: ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್‌ ಲಾಲ್‌ ನೆಹರೂ ಅವರ ಕೊಡುಗೆಗಳನ್ನು ವಿರೂಪಗೊಳಿಸುವ ಮೂಲಕ, ಅವರ ಪರಂಪರೆಯನ್ನೇ ನಾಶ ಮಾಡಿ, ಅಳಿಸಿ ಹಾಕುವುದು ಪ್ರಧಾನಿ ನರೇಂದ್ರ ಮೋದಿ ಅವರ ಏಕೈಕ ಅಜೆಂಡಾ! ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ (ಎನ್‌ಎಂಎಂಎಲ್‌)ವನ್ನು ಪ್ರಧಾನ ಮಂತ್ರಿಗಳ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಗಿದ್ದು, ಆಗಸ್ಟ್‌ 14ರಿಂದಲೇ ಈ ಹೆಸರು ಅಧಿಕೃತವಾಗಿ ಜಾರಿಯೂ ಆಗಿದೆ.

Advertisement

ಈ ಹಿನ್ನೆಲೆಯಲ್ಲಿ ಜೈರಾಮ್‌ ರಮೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಈಗ ಎನ್‌ ತೆಗೆದು ಪಿ ಅನ್ನು ಹಾಕಿದ್ದಾರೆ. ಈ ಪಿ ಅಂದರೆ ಮತ್ತೇನೂ ಅಲ್ಲ. ಸಣ್ಣತನ ಮತ್ತು ಅಸೂಯೆ ಎಂದು ಎಕ್ಸ್‌ನಲ್ಲಿ (ಟ್ವಿಟರ್‌ನಲ್ಲಿ) ಪೋಸ್ಟ್‌ ಕೂಡ ಮಾಡಿದ್ದಾರೆ. ಜತೆಗೆ ಯಾರು ಏನೇ ಮಾಡಿದರೂ ನೆಹರೂ ಪರಂಪರೆ ಜಗತ್ತಿನೆದುರು ಉಳಿದು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next