Advertisement

ನರೇಂದ್ರ ಮೋದಿಗೆ ಜವಾಹರಲಾಲ್‌ ನೆಹರೂ ಸಮಾನರಲ್ಲ: ಛಲವಾದಿ ನಾರಾಯಣಸ್ವಾಮಿ

08:52 PM May 27, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಯಾವುದೇ ರೀತಿಯಲ್ಲಿಯೂ ಸಮಾನರಲ್ಲಾ ಎಂದು ಬಿಜೆಪಿ ಎಸ್‌ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Advertisement

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಮೋದಿಗೆ ನೆಹರೂ ಸಮಾನರಲ್ಲ. ಈ ಸತ್ಯವನ್ನು ಸಿದ್ದರಾಮಯ್ಯ ಬಹಳ ತಡವಾಗಿ ಅರ್ಥಮಾಡಿಕೊಂಡಿದ್ದಾರೆ. ಮೋದಿ ಕಾಲದ ಭಾರತ ಬೇರೆ, ನೆಹರೂ ಕಾಲದ ಭಾರತವೇ ಬೇರೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಪ್ರಧಾನಿ ಮೋದಿ ಕಾರಣರಾಗಿದ್ದಾರೆ ಎಂದು ಹೇಳಿದರು.

ಆರ್‌ ಎಸ್‌ ಎಸ್‌ ನವರು ಈ ದೇಶದವರೇ ಅಲ್ಲ ಅಂದರೆ ಸಿದ್ದರಾಮಯ್ಯ ಯಾವ ದೇಶದವರು? ಸಿದ್ದರಾಮಯ್ಯ ಇತ್ತಿಚೆಗೆ ಮತಿ ಭ್ರಮಣೆ ಆದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಅವರಿಗೆ ಮತಿಭ್ರಮಣೆ ಆದಂತಿದೆ. ಸಿದ್ದರಾಮಯ್ಯಗೆ ದಲಿತರ ಮೇಲೆ ವಿಶ್ವಾಸವಿಲ್ಲ, ದಲಿತರನ್ನು ಕೇವಲವಾಗಿ ಮಾತನಾಡುತ್ತಾರೆ. ಆರ್‌ಎಸ್‌ಎಸ್‌ನ್ನು ದೇಶ ಬಿಟ್ಟು ಓಡಿಸಲು ಸಾಧ್ಯವಿದೆಯಾ ? ನಿಮ್ಮನ್ನು ರಾಜ್ಯ, ದೇಶಬಿಟ್ಟು ಓಡುವಂತೆ ದೇಶವಾಸಿಗಳು ಮಾಡಿದ್ದಾರೆ.

ಸಿದ್ದರಾಮಯ್ಯ ಸಣ್ಣತನದ ಮಾತುಗಳನ್ನು ಆಡುವುದನ್ನು ನಿಲ್ಲಿಸಿದರೆ ಅವರಿಗೆ ಗೌರವ ಬರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next