Advertisement
2022ರ ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದಾಗಿ ರಾಮನಗರ ತಾಲೂಕಿನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿಕಟ್ಟಲಾಗಿದ್ದ, ಮಂಚನಬೆಲೆ, ಸುಗ್ಗನಹಳ್ಳಿ, ಹರೀಸಂದ್ರ, ಮೆಳ್ಳಹಳ್ಳಿ ಗ್ರಾಮಗಳ ಸಮೀಪ ಸೇತುವೆ ಮುರಿದು ಹೋಗಿದ್ದು, ಹಲವು ತಿಂಗಳುಗಳೇ ಕಳೆದರೂ ಈ ಸೇತುವೆ ದುರಸ್ತಿಗೊಂಡಿಲ್ಲ. ಇನ್ನು ಹೊಸ ಸೇತುವೆ ನಿರ್ಮಿಸುವ ಯಾವ ಸೂಚನೆಯೂ ದೊರೆಯದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ.
Related Articles
Advertisement
ಹರೀಸಂದ್ರ ಸೇತುವೆ ಅವ್ಯವಸ್ಥೆ: ತಾಲೂಕಿನ ಹರೀಸಂದ್ರ ಸೇತುವೆ ಸಹ ಕಳೆದ ವರ್ಷ ಸುರಿದ ಬಿರುಮಳೆಯಿಂದ ಹಾನಿಯಾಗಿತ್ತು. ಹರೀಸಂದ್ರ ಗ್ರಾಮದ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಈಸೇತುವೆಯ ಮೂಲಕ ತಿಮ್ಮಸಂದ್ರ, ಮಾದಾಪುರ ಗ್ರಾಮದ ಮೂಲಕ ಬೆಂಗಳೂರು- ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸೇತುವೆ ಇದೀಗ ಮುರಿದು ಹೋಗಿದ್ದು, ಅರ್ಧಂಬರ್ಧ ಇರುವ ಸೇತುವೆಯ ಮೇಲೆ ಈ ಭಾಗದ ಪ್ರಯಾಣಿಕರು ತಿರುಗಾಡುತ್ತಿದ್ದಾರೆ. ಸುತ್ತಿಬಳಸಿ ತಿರುಗಾಡುವ ಪರಿಸ್ಥಿತಿ:
ಜನರ ಆಕ್ರೋಶ : ರಾಮನಗರ ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಹಾನಿಯಾಗಿದ್ದು, ಇದರಿಂದ ಮೆಳ್ಳಹಳ್ಳಿ ಗ್ರಾಮದಿಂದ ಲಕ್ಷ್ಮೀಪುರ, ಮಾಗಡಿ ಮುಖ್ಯರಸ್ತೆಗೆ ಬರಲು ಗ್ರಾಮಸ್ಥರು ಗುಂಗರಹಳ್ಳಿ ಬಳಸಿಕೊಂಡು ಬರುವಂತಾಗಿದೆ. ಈ ಸೇತುವೆ ಮುರಿದು ಹೋಗಿ ಹಲವು ತಿಂಗಳುಗಳೇ ಕಳೆದಿದ್ದರೂ, ಕಾಮಗಾರಿ ಆರಂಭಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾಯದ ಪ್ರಯಾಣ: ಈ ಹಾನಿಗೊಳಗಾಗಿರುವ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಇತ್ತೀಚಿಗೆ ಸುಗ್ಗನಹಳ್ಳಿ ಗೇಟ್ನಿಂದ ರಾತ್ರಿ ವೇಳೆ ಬಸ್ ಇಳಿದು ಸುಗ್ಗನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ಕತ್ತಲಲ್ಲಿ ಕಾಣಿಸದೆ ನದಿಗೆ ಕಾಲುಜಾರಿ ಬಿದಿದ್ದರು. ಹಿಂದಿನಿಂದ ಬರುತ್ತಿದ್ದವರು ನೋಡಿದ ಕಾರಣ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಜೋರಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಹರೀಸಂದ್ರ ಸೇತುವೆ ಬಳಿ ವಾಹನಗಳು ಸಲೀಸಾಗಿ ಪ್ರಯಾಣಿಸದೆ ಸಮಸ್ಯೆಯಾಗುತ್ತಿದೆ. ಹೆಚ್ಚು ಬಾರ ಹೊತ್ತ ಟ್ರಾಕ್ಟರ್ ಹಾಗೂ ಹೆಚ್ಚು ಜನರಿರುವ ವಾಹನಗಳು ಈ ಸೇತುವೆಯನ್ನುದಾಟಲು ಪರದಾಡುವಂತಾಗಿದೆ.
ನಮ್ಮ ಭಾಗದಲ್ಲಿ ಸೇತುವೆಗಳು ಹಾನಿಯಾಗಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮುರಿದ ಸೇತುವೆಯ ಮೇಲೆ ಜೀವ ಭಯದಿಂದ ತಿರುಗಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ವ್ಯಕ್ತಿಗಳು ಇತ್ತ ಗಮನಹರಿಸಿ ನಮಗೆ ಸಮಸ್ಯೆ ಪರಿಹರಿಸಲಿ. -ಹರೀಶ್ಕುಮಾರ್, ವಕೀಲರು, ಸುಗ್ಗನಹಳ್ಳಿ
-ಸು.ನಾ.ನಂದಕುಮಾರ್