Advertisement

ಹಟ್ಟಿ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಕ್ಕಳು ಸಹಿತ ಮೂವರು ನೀರುಪಾಲು

03:30 PM Aug 30, 2020 | keerthan |

ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ತಾಯಿ ತನ್ನ ಇಬ್ಬರು ಮಕ್ಕಳ ಸಹಿತ ನೀರಿಗೆ ಹಾರಿದ ಘಟನೆ ಜಿಲ್ಲೆಯ ಹಟ್ಟಿ ಚಿನ್ನದಗಣಿ ಸಮೀಪದ ಕೋಠಾ ಗ್ರಾಮದ ಬಳಿ ನಡೆದಿದೆ.

Advertisement

ಶನಿವಾರ ಸಂಜೆ ದುರ್ಘಟನೆ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಹಿರೆಹಳ್ಳಕ್ಕೆ ಪಾರ್ವತಿ (35), ಪಾರ್ವತಿಯ ಅಕ್ಕನ ಮಗಳು ಶಿಲ್ಪಾ (12) ಹಾಗೂ ಪಾರ್ವತಿಯ ಮಗ ಅಜಯ (8) ನೀರು ಪಾಲಾದ ದುರ್ದೈವಿಗಳು.

ಇವರುಗಳು ಬಟ್ಟೆ ತೊಳೆಯಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಶನಿವಾರ ತಡರಾತ್ರಿಯಿಂದಲೇ ಶೋಧ ಕಾರ್ಯ ನಡೆಸಿದ್ದು, ರವಿವಾರ ಬೆಳಗ್ಗೆ ಶವಗಳು ಸಿಕ್ಕಿವೆ.

Advertisement

ಮೃತರ ಮನೆಗೆ ತಹಸೀಲ್ದಾರ್ ಚಾಮರಾಜ ಪಾಟೀಲ, ಆರ್.ಐ ರಾಘವೇಂದ್ರ ಭೇಟಿ ನೀಡಿ ಮಾಹಿತಿ ಪಡೆದರು. ಘಟನೆ ಸ್ಥಳಕ್ಕೆ ಸಿಪಿಐ ಯಶವಂತ ಬಿಸ್ನಳ್ಳಿ ನೇತೃತ್ವದ ತಂಡ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next