Advertisement

ರಫೇಲ್‌ ವಿವರ ಸಲ್ಲಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

06:00 AM Oct 11, 2018 | Team Udayavani |

ಹೊಸದಿಲ್ಲಿ: ಈ ವರೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟದ ಅಸ್ತ್ರವಾಗಿದ್ದ ರಫೇಲ್‌ ಡೀಲ್‌ ಪ್ರಕರಣದಲ್ಲಿ ಈಗ ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶವಾಗಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ನಿರ್ಧಾರ ಕೈಗೊಂಡ ಪ್ರಕ್ರಿಯೆಯ ಪೂರ್ಣ ವಿವರ ವನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಕೇಂದ್ರ ಸರಕಾರಕ್ಕೆ ಬುಧವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅ.29ರೊಳಗೆ ವಿವರವನ್ನು ಸಲ್ಲಿಸುವಂತೆ ಸೂಚಿಸಿರುವ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠವು ಅ. 31ರಂದು ಮುಂದಿನ ವಿಚಾ ರಣೆಯನ್ನು ನಿಗದಿಪಡಿಸಿದೆ. ರಫೇಲ್‌ ದರ. ತಾಂತ್ರಿಕ ಮಾಹಿತಿ ಬೇಕಾಗಿಲ್ಲ ಹಾಗೂ ಭ್ರಷ್ಟಾಚಾರ ಆರೋಪದ ಬಗ್ಗೆಯೂ ನಾವು ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. 

Advertisement

ರಫೇಲ್‌ ಡೀಲ್‌ಗೆ ಸಂಬಂಧಿಸಿ ಸಲ್ಲಿಕೆ ಯಾಗಿರುವ ಪಿಐಎಲ್‌ಗ‌ಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರ ತಿಳಿಸಿದೆ. ಕೇಂದ್ರ ಸರಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ದೇಶದ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ಯಿಂದ ಒಪ್ಪಂದದ ವಿವರಗಳನ್ನು ಯಾರಿಗೂ ತೋರಿಸಬಾರದು ಮತ್ತು ಖರೀದಿ ಪ್ರಕ್ರಿಯೆ ಯಲ್ಲಿ ಒಳಗೊಂಡಿರುವ ಇತರ ಮಾಹಿತಿ ಗಳನ್ನೂ ಯಾರಿಗೂ ನೀಡಬಾರದು ಎಂದು ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿ ಸಿದ ಪೀಠ, ನಾವು ದರ ಹಾಗೂ ಸೂಕ್ತತೆ ಕುರಿತು ಏನನ್ನೂ ಕೇಳುವುದಿಲ್ಲ. ನಿರ್ಧಾರ ಕೈಗೊಂಡ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಿಕ್ಕಿದರೆ ಸಾಕು. ಈ ಪ್ರಕ್ರಿಯೆಯ ಕಾನೂನಾತ್ಮಕತೆ ಗೊತ್ತಾಗಬೇಕು ಅಷ್ಟೆ ಎಂದು ಹೇಳಿತು. ಜತೆಗೆ ಎರಡು ಪಿಐಎಲ್‌ಗ‌ಳಿಗೆ ಸಂಬಂಧಿಸಿ ಸರಕಾರಕ್ಕೆ ನೋಟಿಸ್‌ ಅನ್ನೂ ಜಾರಿ ಮಾಡುವುದಿಲ್ಲ ಎಂದಿತು.

ಇದೇ ವೇಳೆ, ಪ್ರಕರಣ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿ ಸಿರುವ ಕಾಂಗ್ರೆಸ್‌, ಮೋದಿ ಸರಕಾರವು ರಫೇಲ್‌ ಒಪ್ಪಂದದ ಪ್ರಕ್ರಿಯೆಯನ್ನೇ ತಿರುಚಿದೆ. ಡೀಲ್‌ಗೆ ಆಕ್ಷೇಪ ಎತ್ತಿದ ಅಧಿಕಾರಿಗಳನ್ನು ಶಿಕ್ಷಿಸಲಾಗಿದೆ. ಯಾರು ತಮಗೆ ಸಾಥ್‌ ನೀಡಿದ್ದಾರೋ ಅಂಥ ಅಧಿಕಾರಿಗಳಿಗೆ ಪ್ರತಿಫ‌ಲ ನೀಡಲಾಗಿದೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next