Advertisement

Hunsur: ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ

09:02 AM Jun 19, 2023 | Team Udayavani |

ಹುಣಸೂರು: ರಾಷ್ಟ್ರೀಯ ಹೆದ್ದಾರಿ-275ಕ್ಕೆ ಭೂ ಸ್ವಾಧೀನಪಡಿಸಿಕೊಳ್ಳುವ ಮೊದಲು ಸೂಕ್ತ ಬೆಲೆ ನಿಗದಿ ಮಾಡುವವರೆಗೂ ರಸ್ತೆ ಮಾಡಲು ಬಿಡುವುದಿಲ್ಲ, ಮತ್ತು  ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಹಾಗೂ ಅನಿವಾರ್ಯವಾದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

Advertisement

ತಾಲೂಕಿನ ತೆಂಕಲಕೊಪ್ಪಲಿನ ಸಮುದಾಯ ಭವನದಲ್ಲಿ ಜೂ.18ರ ಭಾನುವಾರ ರೈತ ಸಂಘದ ರಾಜ್ಯದ್ಯಕ್ಷ ಬಡಕಲಪುರ ನಾಗೇಂದ್ರರ ಅಧ್ಯಕ್ಷತೆಯಲ್ಲಿ ಕೃಷಿಕರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಹೊಸದಾಗಿ ನಿರ್ಮಿಸಲುದ್ದೇಶಿಸಿರುವ ಶ್ರೀರಂಗಪಟ್ಟಣ-ಕುಶಾಲನಗರ ರಾಷ್ಟ್ರೀಯ 275 ರ ರಸ್ತೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ಭೂಮಿ ಹೋರಾಟ ಸಮಿತಿ ಅಧ್ಯಕ್ಷ ಅವಿನಾಶ್ ಮತ್ತಿತರರು ಮಾತನಾಡಿ ಮೈಸೂರು ತಾಲೂಕಿನ ರೈತರ ಜಮೀನಿಗೆ 1.20 ಕೋಟಿ ನಿಗದಿಗೊಳಿಸಿದ್ದಾರೆ.

ಹುಣಸೂರು ತಾಲೂಕಿನ ತೆಂಕಲಕೊಪ್ಪಲು, ರಾಮೇನಹಳ್ಳಿ ಭಾಗದ ರೈತರಿಗೆ 9-12 ಲಕ್ಷ ನಿಗದಿಗೊಳಿಸಿದ್ದರೆ, ಕಿರಿಜಾಜಿಯಲ್ಲಿ 40 ಲಕ್ಷ ನಿಗದಿಪಡಿಸಿದ್ದಾರೆ. ಇದು ರೈತರಿಗೆ ಹೆದ್ದಾರಿ ಪ್ರಾಧಿಕಾರ ಮಾಡುತ್ತಿರುವ ಅನ್ಯಾಯ. ಸರಕಾರ, ಪ್ರಾಧಿಕಾರ ಕೃಷಿಕರ ಭೂಮಿಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ವಶಪಡಿಸಿಕೊಳ್ಳುವ ಎಲ್ಲ ಭೂ ಒಡೆಯರಿಗೂ ಎಕರೆಗೆ ಕನಿಷ್ಟ ಒಂದು ಕೋಟಿ ರೂ. ನಿಗದಿಪಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾದೀತೆಂದರು.

ಕೃಷಿಕರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಬಡಗಲ ಪುರನಾಗೇಂದ್ರರವರು ರೈತರ ಹೋರಾಟಕ್ಕೆ ಸಂಘ ಬೆನ್ನೆಲುಬಾಗಿ ನಿಲ್ಲಲಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರನ್ನು ಸಂಘವು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಅಲ್ಲದೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರನ್ನು ಜಲದರ್ಶಿನಿಯಲ್ಲಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ರೈತ ಮುಖಂಡರ ಸಭೆ ನಡೆಸಿ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ಮಾಹಿತಿ ನೀಡಿದರು.

Advertisement

ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ, ಒಂದು ಬಾರಿ ರೈತರು ಭೂಮಿ ಕಳೆದುಕೊಂಡಲ್ಲಿ ಮತ್ತೆ ಸಂಪಾದನೆ ಕಷ್ಟಸಾಧ್ಯವಾಗಿದ್ದು, ಭೂಮಿಗೆ ಏಕರೂಪ ದರ ನಿಗದಿಪಡಿಸಬೇಕು. ಇಲ್ಲವೇ ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರು ಹೆದ್ದಾರಿ ನಿರ್ಮಾಣಕ್ಕೆ ಜಿಲ್ಲೆಯ ಸಹಕಾರ ನೀಡುವುದಿಲ್ಲ, ಈಗಾಗಲೇ ಹೆದ್ದಾರಿ ಭೂಮಿ ವಶಪಡಿಸಿಕೊಳ್ಳುವುದರ ವಿರುದ್ದ ಯಾವುದೇ ಹೋರಾಟ, ನ್ಯಾಯಾಲಯ ಮೆಟ್ಟಿಲೇರಲೂ ಸಹ ಸಂಘ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ಬೆಂಕಿಪುರಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಬೆಟ್ಟದೂರು ಮಂಜು, ನಾಗಣ್ಣ, ವೆಂಕಟೇಶ್, ವಿಷಕಂಠಪ್ಪ, ಗುಂಜೇಗೌಡ ಸೇರಿದಂತೆ 200 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next