Advertisement

ಅಳಿವೆ ಬಾಗಿಲಿನಲ್ಲಿ ಬೀಡು ಬಿಟ್ಟ ಎನ್‌ಡಿಆರ್‌ಎಫ್‌

07:23 AM Jul 31, 2019 | Team Udayavani |

ಉಳ್ಳಾಲ: ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಮೂರು ತಿಂಗಳ ಅವಧಿಗೆ ಜಿಲ್ಲೆಗೆ ಆಗಮಿಸಿದ್ದ ಆಂಧ್ರಪ್ರದೇಶದ ಗುಂಟೂರಿನ ಎನ್‌ಡಿಆರ್‌ಎಫ್‌ ತಂಡ ಸಿದ್ಧಾರ್ಥ್ ಪತ್ತೆ ಕಾರ್ಯಕ್ಕೆ ಮಂಗಳವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಿತ್ತು. ಎನ್‌ಡಿಆರ್‌ಎಫ್‌ ಇನ್‌ಸ್ಪೆಕ್ಟರ್‌ ಉಪಾಧ್ಯಾಯ ನೇತೃತ್ವದಲ್ಲಿ 23 ಸಿಬಂದಿ ಮೂರು ರಬ್ಬರ್‌ ಬೋಟ್‌ಗಳಲ್ಲಿ ರಾತ್ರಿ 7 ಗಂಟೆಯವರೆಗೆ ನಿರಂತರ ಕಾರ್ಯಾಚರಣೆ ನಡೆಸಿದರು. ಅಳಿವೆ ಬಾಗಿಲಿನಿಂದ ಘಟನೆ ನಡೆದ ನೇತ್ರಾವತಿ ಸೇತುವೆಯ ವರೆಗೆ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯ ಈಜುಗಾರರ ತಂಡ ಸಾಥ್‌ ನೀಡಿತ್ತು. ಅಗ್ನಿಶಾಮಕ ದಳವೂ ತೊಡಗಿಸಿಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next