Advertisement

ಕರ್ತಾಪುರ್ ಗುರುದ್ವಾರ ಭೇಟಿ-ಭಾರತೀಯ ಯಾತ್ರಿಗಳಿಗೆ ಪಾಸ್ ಪೋರ್ಟ್ ಬೇಕಾಗಿಲ್ಲ;ಇಮ್ರಾನ್ ಖಾನ್

08:25 AM Nov 02, 2019 | Team Udayavani |

ಇಸ್ಲಾಮಾಬಾದ್: ನಾರೋವಾಲ್ ಜಿಲ್ಲೆಯಲ್ಲಿರುವ ಕರ್ತಾಪುರ್ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲಿರುವ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸಿರುವ ಕೆಲವು ಷರತ್ತುಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಘೋಷಿಸಿದ್ದಾರೆ.

Advertisement

ನವೆಂಬರ್ 12ರಂದು ಸಿಖ್ಖ್ ರ ಧರ್ಮ ಗುರು ಗುರು ನಾನಕ್ ಅವರ 550ನೇ ಜಯಂತಿ ಹಿನ್ನೆಲೆಯಲ್ಲಿ ನವೆಂಬರ್ 9ರಂದು ಪಾಕಿಸ್ತಾನದ ಕರ್ತಾಪುರ್ ಸಾಹಿಬ್ ಅನ್ನು ಸಂಪರ್ಕಿಸುವ ಕಾರಿಡಾರ್ ಯೋಜನೆ ಉದ್ಘಾಟನೆಯಾಗಲಿದೆ.

ಕರ್ತಾಪುರ್ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಖಾನ್, ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿಲ್ಲ. ಆದರೆ ಗುರುತು ಪತ್ರ ಕಡ್ಡಾಯವಾಗಿದೆ. ಹತ್ತು ದಿನದ ಮೊದಲೇ ಭೇಟಿಯ ಬಗ್ಗೆ ರಿಜಿಸ್ಟರ್ ಮಾಡಬೇಕಾಗಿಲ್ಲ. ಕರ್ತಾಪುರ್ ಕಾರಿಡಾರ್ (ನ.9) ಉದ್ಘಾಟನೆ ದಿನ ಮತ್ತು ಗುರುನಾನಕ್ ಜಯಂತಿ(ನ.12) ದಿನ ಮಾತ್ರ 20 ಅಮೆರಿಕನ್ ಡಾಲರ್ ಸೇವಾ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಉಳಿದ ದಿನ ಹಣ ಪಾವತಿಸಬೇಕು ಎಂದು ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next