Advertisement

“ರಾಷ್ಟ್ರವೇ ಮೊದಲು’ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

08:56 PM Jan 28, 2022 | Team Udayavani |

ನವದೆಹಲಿ: ಯಾವ ರಾಷ್ಟ್ರದಲ್ಲಿ “ದೇಶವೇ ಮೊದಲು’ ಎನ್ನುವ ಮನೋಭಾವದ ಯುವಕರಿರುತ್ತಾರೋ ಆ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ನಡೆದ ಎನ್‌ಸಿಸಿ ರ್‍ಯಾಲಿಯಲ್ಲಿ ಹೇಳಿದ್ದಾರೆ.

Advertisement

ನವದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ದೇಶದ ಗಡಿ ಭಾಗದಲ್ಲಿರುವ ಸ್ಥಳಗಳಲ್ಲಿ ಲಕ್ಷಕ್ಕೂ ಅಧಿಕ ಎನ್‌ಸಿಸಿ ಕೆಡೆಟ್‌ಗಳನ್ನು ನೇಮಿಸಲಾಗಿದೆ. ಹೆಣ್ಣು ಮಕ್ಕಳು ಇನ್ನೂ ಹೆಚ್ಚಾಗಿ ಎನ್‌ಸಿಸಿ ಸೇರಬೇಕು. ಕೆಡೆಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿ ಬಗ್ಗೆ ಜಾಗೃತಿ ಮೂಡಿಸಬೇಕು. ವೋಕಲ್‌ ಫಾರ್‌ ಲೋಕಲ್‌, ಡ್ರಗ್ಸ್‌ ಮುಕ್ತ ಭಾರತದ ಬಗ್ಗೆಯೂ ಜಾಗೃತಿ ಮೂಡಿಸಬೇಕು’ ಎಂದಿದ್ದಾರೆ. ತಾವೂ ಒಬ್ಬ ಎನ್‌ಸಿಸಿ ಕೆಡೆಟ್‌ ಆಗಿದ್ದೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯಿದೆ ಎಂದರು.

ಇದನ್ನೂ ಓದಿ:ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

ಗಮನಸೆಳೆದ ಟೋಪಿ:
ರ್‍ಯಾಲಿ ವೇಳೆ ಪ್ರಧಾನಿ ಮೋದಿಯವರು ತೊಟ್ಟಿದ್ದ ಟೋಪಿ ಎಲ್ಲರ ಗಮನ ಸೆಳೆದಿದೆ. ಸಿಖ್‌ ಕೆಡೆಟ್‌ನ ಟರ್ಬನ್‌ ಅನ್ನು ಅವರು ಧರಿಸಿದ್ದರು. ರೈಫೆಲ್‌ ಹಸಿರು ಬಣ್ಣದ ಟರ್ಬನ್‌ಗೆ ಕೆಂಪು ಬಣ್ಣದ ಗರಿ ಗಳಿದ್ದವು. ಈ ಹಿಂದೆ ಗಣರಾಜ್ಯೋತ್ಸವ ದಿನದಂದು ಮೋದಿಯವರು ತೊಟ್ಟಿದ್ದ ಉತ್ತರಾಖಂಡದ ಸಾಂಪ್ರದಾಯಿಕ ಟೋಪಿಯೂ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next