Advertisement
ಜಿಲ್ಲಾ ಯುವಕ ಸಂಘದ ಮೂಲಕ ಸಮಾಜ ಸೇವೆಗೆ ಕಾಲಿಟ್ಟ ನಜೀರ್ ಶೇಖ್ ಹಿಂತಿರುಗಿ ನೋಡಿದ್ದೇ ಇಲ್ಲ. ನೆಹರು ಯುವಕ ಕೇಂದ್ರ, ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರಾಗಿ ಕ್ರಿಯಾಶೀಲರಾಗಿದ್ದಾರೆ.
Related Articles
Advertisement
ಕುಟುಂಬದ ಎಲ್ಲ ಸದಸ್ಯರು ರಕ್ತದಾನ ಮಾಡುವುದು ರೂಢಿಸಿಕೊಂಡ ಕಾರಣ 2015ರಲ್ಲಿ ನಜೀರ್ ಅಹಮ್ಮದ್ ಯು. ಶೇಖ್ ಕುಟುಂಬವನ್ನು ರಕ್ತದಾನ ಜಾಗೃತಿ ಕುಟುಂಬವಾಗಿ ಜಿಲ್ಲಾ ಆರೋಗ್ಯ ಇಲಾಖೆ ಗುರುತಿಸಿತು. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ನಜೀರ್ ಕುಟುಂಬವನ್ನು ಈ ಕಾರಣಕ್ಕೆ ರಕ್ತದಾನ ದಿನಾಚರಣೆ ದಿನ ಅಂದಿನ ಜಿಲ್ಲಾ ನ್ಯಾಯಾ ಧೀಶರಾದ ರೇಣುಕೆ ಅವರು ನಜೀರ್ ಅವರನ್ನು ಸನ್ಮಾನಿಸಿ ರಕ್ತದಾನ ಜಾಗೃತಿ ಮುಂದುವರಿಸುವಂತೆ ಸೂಚಿಸಿದ್ದರು.
ರಕ್ತದ ಗುಂಪು ಗುರುತಿಸುವಿಕೆ: 2017-18ರಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ತೆರಳಿದ ನಜೀರ್ ಶೇಖ್ ವಿದ್ಯಾರ್ಥಿಗಳ ರಕ್ತದ ಗುಂಪು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಇದಕ್ಕಾಗಿ ಅವರು ಜಿಲ್ಲಾಸ್ಪತ್ರೆಯ ರಕ್ತದಾನ ಬ್ಯಾಂಕ್ ಸಿಬ್ಬಂದಿ ನೆರವು ಪಡೆದು ಈ ಕಾಯಕ ಮುಂದುವರಿಸಿದರು.ಇದರಿಂದ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ತಿಳಿಸಲು ಒಂದು ದಾರಿ ಸೃಷ್ಟಿಯಾಯಿತು. ಇಂತಹ 53 ಶಿಬಿರಗಳು ಬ್ಲಿಡ್ ಗ್ರೂಪ್ ಟೆಸ್ಟ್ ಗಾಗಿ ನಡೆದವು. ಜೊತೆಗೆ 2017-18ರಲ್ಲೇ 40 ರಕ್ತದಾನ ಶಿಬಿರಗಳು ಸಹ ನಡೆಸುವ ಮೂಲಕ ಕಾರವಾರ ತಾಲೂಕಿನಲ್ಲಿ ರಕ್ತದಾನದ ಮಹತ್ವ ಸಾರಲು ನಜೀರ್ ಶೇಖ್ ಅವರೇ ಕಟ್ಟಿದ ಆಜಾದ್ ಯುತ್ ಕ್ಲಬ್ ಶ್ರಮ ಹಾಕಿತು.
ಸಂದ ಪ್ರಶಸ್ತಿ
ರಕ್ತದಾನದ ಮಹತ್ವ ಸಾರಲು ಹೆಚ್ಚು ಸಮಯ ಮೀಸಲಿಟ್ಟ ನಜೀರ್ ಅವರಿಗೆ 1989ರಲ್ಲೇ ರಾಜ್ಯ ಯುವ ಪ್ರಶಸ್ತಿ ಹುಡುಕಿ ಬಂತು. 1991ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ, 2008ರಲ್ಲಿ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ.
ಜಿಲ್ಲಾ ರೆಡ್ ಕ್ರಾಸ್ನಲ್ಲಿ ನಜೀರ್ ಕ್ರಿಯಾಶೀಲ ಸದಸ್ಯರಾಗಿದ್ದು, 2009ರಲ್ಲಿ ಅಂದಿನ ರೆಡ್ ಕ್ರಾಸ್ಸಂಸ್ಥೆ ಅಧ್ಯಕ್ಷ ರಾಮೇಶ್ವರ ಠಾಕೂರ್ ಉತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. 2016ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅತ್ಯಂತ ಸಂಕಷ್ಟದಲ್ಲಿರುವವರಿಗೆ ರಕ್ತದಾನ ಮಾಡಿದೆ ಎಂಬ ಆತ್ಮತೃಪ್ತಿ ಸದಾ ನಮ್ಮೊಂದಿಗೆ ಇದೆ. ಆಸ್ಪತ್ರೆಯಲ್ಲಿ ಇರುವವರಿಗೆ ರಕ್ತದ ಅವಶ್ಯಕತೆ ಬಿದ್ದಾಗ ರಕ್ತದಾನ ಮಾಡಿ. ನಿಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ. ರಕ್ತದಾನ ಮಾಡಿದರೆ ಹೊಸದಾಗಿ ರಕ್ತ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ಜೀವನವೂ ನಮ್ಮದಾಗುತ್ತದೆ.
ನಜೀರ್ ಅಹಮ್ಮದ್ ಶೇಖ್ ನಾಗರಾಜ್ ಹರಪನಹಳ್ಳಿ