Advertisement

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

07:27 PM Apr 27, 2024 | Team Udayavani |

ಬೆಳಗಾವಿ: ವೈಯಕ್ತಿಕ ಸಂಬಂಧಗಳನ್ನು ಬದಿಗೊತ್ತಿ ಮುಸ್ಲಿಂ ಬಾಂಧವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಸತಿ ಮತ್ತು ವಕ್ಪ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಚಿವ ಜಮೀರ್ ಮಾತಿನ ಭರದಲ್ಲಿ ಡಯಾಸ್ ನ ಗಾಜನ್ನು ಪುಡಿ ಪುಡಿ ಮಾಡಿ ಸುದ್ದಿಯಾಗಿದ್ದಾರೆ.

Advertisement

ಗೋಕಾಕದಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ಅಷ್ಟೇ ಅಲ್ಲ, ನಿರಂತರ ಜನರ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಮೂಲಭೂತ ಸೌಲಭ್ಯಗಳನ್ನು ನೀಡುವ ಕಾರ್ಯಮಾಡುತ್ತಾ ಬಂದಿದೆ. ಬಿಜೆಪಿಗೆ ಹಿಂದೂ, ಮುಸ್ಲಿಂ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳು ಇಲ್ಲ. ಜಾತಿಯತೆ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ, ಎಲ್ಲರೂ ಒಂದಾಗಿ ಬಾಳುವುದನ್ನು ಹೇಳಿಕೊಟ್ಟಿದೆ’ ಎಂದರು.

ಭಾಷಣ ಮಾಡುವ ಭರದಲ್ಲಿ ಡಯಾಸ್ ನ ಗಾಜು ಕುಟ್ಟಿದ ಅಬ್ಬರಕ್ಕೆ ಪುಡಿಯಾಯಿತು. ಇದು ಪಠಾಣನ ದೇಹ ಇದಕ್ಕೆ ಏನೂ ಆಗುವುದಿಲ್ಲ ಎಂದು ಡೈಲಾಗ್ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next