Advertisement

ಚಿತ್ರದುರ್ಗ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಎಸ್ ಐ

03:39 PM Oct 03, 2021 | Team Udayavani |

ಚಿತ್ರದುರ್ಗ: ತಾಲೂಕಿನ ಹೊರ ವಲಯದ ದಂಡಿನ ಕುರುಬರ ಹಟ್ಟಿ ಬಳಿ ಎಎಸ್ ಐ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

Advertisement

ಗುರುಮೂರ್ತಿ (50) ಆತ್ಮಹತ್ಯೆ ಮಾಡಿಕೊಂಡಿರುವ ಎಎಸ್ ಐ. ಇವರು ನಾಯಕನಹಟ್ಟಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಎಎಸ್ ಐ ಗುರುಮೂರ್ತಿ ಅವರು ಶನಿವಾರ ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆ ಕರ್ತವ್ಯ ಬಂದಿದ್ದರು. ರಾತ್ರಿ ಊರಿಗೆ ವಾಪಾಸಾಗುವಾಗ ದಂಡಿನ ಕುರುಬರ ಹಟ್ಟಿ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೇಂದು ಇದುವರೆಗೆ ತಿಳಿದು ಬಂದಿಲ್ಲ.

ಇದನ್ನೂ ಓದಿ:ನಾಪತ್ತೆಯಾಗಿದ್ದ ನಾಲ್ವರು ಸೈನಿಕರು ಶವವಾಗಿ ಪತ್ತೆ ,ಉಳಿದವರ ರಕ್ಷಣೆ

ಸ್ಥಳಕ್ಕೆ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next