Advertisement

ದಾಂತೇವಾಡದಲ್ಲಿ ನಕ್ಸಲರ ಆರ್ಭಟ, ಪ್ರತ್ಯುತ್ತರ ಜೋರಾಗಿರಲಿ

10:31 AM May 23, 2018 | Team Udayavani |

ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲರು ಮತ್ತೂಮ್ಮೆ ನಮ್ಮ ಸುರಕ್ಷತಾ ದಳಗಳ ಮೇಲೆ ದಾಳಿ ಮಾಡಿದ್ದಾರೆ. ರಸ್ತೆಯಡಿ ಇಟ್ಟಿದ್ದ ನೆಲಬಾಂಬ್‌ ಸ್ಫೋಟಿಸಿದ್ದರಿಂದ ವಾಹನವೊಂದರಲ್ಲಿದ್ದ 7 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಯ ಸೈನಿಕರು ರಸ್ತೆ ನಿರ್ಮಾಣ ಕಾರ್ಯಕ್ಕೆ ಭದ್ರತೆ ಒದಗಿಸಲು ಹೊರಟಿದ್ದ ವೇಳೆ ಈ ಸ್ಫೋಟ ನಡೆದಿದೆ. ಈ ದಾಳಿಯಲ್ಲಿ ಭಾರೀ ಪ್ರಮಾಣದ ಸೊ#àಟಕಗಳನ್ನು (ಐಇಡಿ-ಸುಧಾರಿತ ಸ್ಫೋಟಕ ಸಾಧನ) ಬಳಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಛತ್ತೀಸ್‌ಗಢಕ್ಕೆ ಬರುವ ಸಮಯದಲ್ಲೇ ಈ ಸ್ಫೋಟ ನಡೆದಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಘಟನೆ ನಡೆದ ಪ್ರದೇಶದಲ್ಲಿ ವಿಕಾಸ ಯಾತ್ರೆ ನಡೆಸುವವರಿದ್ದಾರೆ. ಈ ಕಾರಣಕ್ಕಾಗಿಯೇ ಈ ಘಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಕ್ಸಲರು ಕಳುಹಿಸುತ್ತಿರುವ ಎಚ್ಚರಿಕೆಯ ಸಂದೇಶ ಎಂದು ಭಾವಿಸಲಾಗುತ್ತಿದೆ.

Advertisement

ಇತ್ತೀಚೆಗೆ ಮಹಾರಾಷ್ಟ್ರದ ಗಡಿcರೋಲಿ, ಓಡಿಶಾದ ಮಲ್ಕಂಗಿರಿ ಮತ್ತು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಮಾವೋಯಿಸ್ಟರಿಗೆ ಭಾರೀ ಆಘಾತವಾಗಿತ್ತು. ಈ ಘಟನೆಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎನ್ನುತ್ತಾರೆ ಛತ್ತೀಸ್‌ಗಢದ ಪೊಲೀಸರು. 

ಕೆಲ ಸಮಯದಿಂದ ಛತ್ತೀಸ್‌ಗಢದಲ್ಲಿ ಸಶಸ್ತ್ರ ಪಡೆಗಳು ನಕ್ಸಲೀಯರ ವಿರುದ್ಧ ಮೇಲುಗೈ ಸಾಧಿಸುತ್ತಿರುವುದರಿಂದ ಅವರಿಗೆಲ್ಲ ದುಃಖವಾಗಿದೆ. ಈಗಿನ ವಿಸ್ಫೋಟ ಈ ದುಃಖದ ದುಷ್ಪರಿಣಾಮ ಎನ್ನುತ್ತಾರೆ ಛತ್ತೀಸ್‌ಗಢದ ನಕ್ಸಲ್‌ ವಿರೋಧಿ ಅಭಿಯಾನದ ಉಪ ಮಹಾನಿರೀಕ್ಷಕರು. 

ಆದರೆ ಎರಡು ತಿಂಗಳ ಹಿಂದೆಯೂ ಸುಕಾ¾ದಲ್ಲಿ ಇದೇ ರೀತಿಯ ಸ್ಫೋಟ ನಡೆಸಿದ್ದ ನಕ್ಸಲೀಯರು ನಮ್ಮ ಭದ್ರತಾಪಡೆಗಳ 9 ಸೈನಿಕರ ಪ್ರಾಣ ತೆಗೆದಿದ್ದರು. ಇದನ್ನೆಲ್ಲ ನೋಡಿದಾಗ ನಕ್ಸಲ್‌ ಸಮಸ್ಯೆಯ ಮೇಲೆ ಹಿಡಿತ ಸಾಧಿಸುವುದಕ್ಕೆ ಭದ್ರತಾಪಡೆಗಳಿಗೆ ಇನ್ನೂ ಸಮಯ ಹಿಡಿಯಲಿದೆ ಎನ್ನುವುದು ಸ್ಪಷ್ಟವಾಗುತ್ತದೆ. 

ಆದಾಗ್ಯೂ ಈಗ ದೇಶದಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳ ಸಂಖ್ಯೆ ಗಣ ನೀಯವಾಗಿ ತಗ್ಗಿದೆ. ಇದೇ ವರ್ಷದ ಏಪ್ರಿಲ್‌ ತಿಂಗಳಲ್ಲಿ ಕೇಂದ್ರ ಸರ್ಕಾರ ದೇಶದ 44 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಪಟ್ಟಿಯಿಂದ ತೆಗೆದುಹಾಕಿದೆ. ಸದ್ಯಕ್ಕೆ ದೇಶದಲ್ಲಿ ನಕ್ಸಲರು ಮೂವತ್ತು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ದಾಂತೇವಾಡ ಕೂಡ ಇಂಥ ಪ್ರದೇಶಗಳಲ್ಲೊಂದು. ಸೋಲಿನ ಕೊನೆಯ ಹಂತ ತಲುಪಿರುವ ನಕ್ಸಲರು ಪ್ರಬಲ ಪ್ರತಿರೋಧ ಒಡ್ಡುತ್ತಿರುವುದು ಸತ್ಯ.

Advertisement

ಹಾಗೆ ನೋಡಿದರೆ ನಮ್ಮ ಭದ್ರತಾ ಪಡೆಗಳಿಗೆ ಐಇಡಿ ಸ್ಫೋಟಕಗಳೇ ಅತ್ಯಂತ ಅಪಾಯಕಾರಿ ಸವಾಲೊಡ್ಡುತ್ತಿವೆ. ನೆಲಬಾಂಬ್‌ಗಳನ್ನು ಪತ್ತೆ ಹಚ್ಚುವುದೇ ಅವಕ್ಕೆ ದೊಡ್ಡ ಸವಾಲು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಕ್ಸಲರು ರಸ್ತೆ ಕೆಳಗೆ ಬಾಂಬುಗಳನ್ನಿಡಲು ಯಶಸ್ವಿಯಾಗಿಬಿಡುತ್ತಾರೆ. ಒಂದು ಅಡಿಗೂ ಕೆಳಗೆ ಹುದುಗಿರುವ ವಿಸ್ಫೋಟಕಗಳನ್ನು ಪತ್ತೆಹಚ್ಚುವ ಸಕ್ಷಮ ಉಪಕರಣಗಳು ಭದ್ರತಾಪಡೆಗಳ ಬಳಿ ಇಲ್ಲ ಎಂದು ಒಪ್ಪಿಕೊಳ್ಳುತ್ತಾರೆ ರಮಣ್‌ ಸಿಂಗ್‌. ಇದೇ ಕಾರಣಕ್ಕಾಗಿಯೇ ಭಾರತೀಯ ಸೇನೆ ಐಐಟಿ ಬಾಂಬೆ ಅಭಿವೃದ್ಧಿಪಡಿಸುತ್ತಿರುವ, ಐಇಡಿಗಳನ್ನು ಪತ್ತೆಹಚ್ಚುವ ರೊಬಾಟ್‌ಗಳನ್ನು ಬಳಸಲು ಸಿದ್ಧವಾಗುತ್ತಿದೆ. ಆದರೆ ನಾಲ್ಕು ಚಕ್ರದ ಈ ರೊಬಾಟ್‌ಗಳು ರಣರಂಗಕ್ಕೆ ಇಳಿಯಲು ಸಮಯ ಹಿಡಿಯ ಬಹುದು. ಒಂದು ವೇಳೆ ಈ ವಿಷಯದಲ್ಲಿ ಯಶಸ್ಸು ಸಿಕ್ಕಿತೆಂದರೆ ನಕ್ಸಲರ ಬಹುದೊಡ್ಡ ಯುದ್ಧತಂತ್ರವೇ ಕುಸಿದುಬೀಳುತ್ತದೆ. ದುರಂತವೆಂದರೆ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನೂ ನಕ್ಸಲರು ಬಯಸುವುದಿಲ್ಲ ಎನ್ನುವುದಕ್ಕೆ ರಸ್ತೆ ನಿರ್ಮಾಣದಂಥ ಕಾರ್ಯಗಳಿಗೆ ಅವು ಮಾಡುತ್ತಿರುವ ಹಾನಿಯೂ ಸಾಕ್ಷಿ. 

ಇದೇನೇ ಇದ್ದರೂ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸ್ಥಳೀಯ ಜನರೊಂದಿಗೆ ಇನ್ನೂ ಏಕೆ ತಾಳಮೇಳ ಹೊಂದಾಣಿಕೆಯಾಗುತ್ತಿಲ್ಲ ಎನ್ನು ವುದೂ ಯೋಚಿಸಬೇಕಾದ ವಿಷಯವೇ. ಸ್ಥಳೀಯರ ಪೂರ್ಣ ಸಹಕಾರ ದೊರೆತರೆ ಅಳಿದುಳಿದ ನಕ್ಸಲರ ಬೆನ್ನೆಲುಬೇ ಮುರಿಯುತ್ತದೆ ಎನ್ನುವುದು ಭದ್ರತಾ ಪಡೆಗಳಿಗೆ ಮತ್ತು ಸರ್ಕಾರಕ್ಕೆ ತಿಳಿದಿದೆ. ಹೀಗಾಗಿ ನಕ್ಸಲ್‌ ಪೀಡಿತ ಪ್ರದೇಶದ ಜನರತ್ತ ಹೆಚ್ಚು ಆಪ್ತತೆಯಿಂದ ತಲುಪುವ, ಅವರಿಗೆ ಸುರಕ್ಷತೆ ನೀಡುವ ಕೆಲಸಕ್ಕೆ ಇನ್ನಷ್ಟು ಒತ್ತುಕೊಡಬೇಕಿದೆ. ಎಲ್ಲಿಯವರೆಗೂ ಸರ್ಕಾರ ಸ್ಥಳೀಯ ಜನರ ಭರವಸೆಯನ್ನು ಗೆಲ್ಲುವು ದಿಲ್ಲವೋ ಅಲ್ಲಿಯವರೆಗೂ ಪೂರ್ಣವಾಗಿ ನಕ್ಸಲರನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಇದರ ಜೊತೆಯಲ್ಲೇ ನಕ್ಸಲರಿಗೆ ಕಳ್ಳಮಾರ್ಗದಿಂದ ಸಿಗುತ್ತಿರುವ ಶಸ್ತ್ರಾಸ್ತ್ರ, ಆಹಾರ ಸಮೇತ ವಿವಿಧ ಬೆಂಬಲ ಮೂಲಕ್ಕೂ ಜೋರಾಗಿ ಪೆಟ್ಟುಕೊಡಬೇಕಾದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next