Advertisement

ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿ ಸೆರೆ

11:26 PM Nov 09, 2021 | Team Udayavani |

ಕಲ್ಲಿಕೋಟೆ: ಪಶ್ಚಿಮ ಘಟ್ಟದ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ, ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಬಿಜಿಕೆ ಎಂದೇ ಕರೆಯಲ್ಪಡುವ ಶೃಂಗೇರಿ ಮೂಲದ ಕೃಷ್ಣಮೂರ್ತಿಯನ್ನು ವಯನಾಡ್‌ನ‌ ಸುಲ್ತಾನ್‌ಬತ್ತೇರಿಯಲ್ಲಿ ಬಂಧಿಸಲಾಗಿದೆ.

ಆತನ ಜತೆಗಿದ್ದ ನಕ್ಸಲ್‌ ನಾಯಕಿ ಸಾವಿತ್ರಿ ಯಾನೆ ರೆಜಿತಾಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಮೂರ್ತಿ ವಿರುದ್ಧ 53 ಮತ್ತು ಸಾವಿತ್ರಿ ವಿರುದ್ಧ 22 ಕೇಸುಗಳು ಕರ್ನಾಟಕದ ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.

2005 ರಲ್ಲಿ ಸಾಕೇತ್ ರಾಜನ್ ಹತ್ಯೆಯ ನಂತರ ಮತ್ತು 2006 ರಲ್ಲಿ ಚಳುವಳಿಯ ವಿಭಜನೆಯ ನಂತರ ಅವರು ಕರ್ನಾಟಕದಲ್ಲಿ ಪಕ್ಷದ ನಾಯಕರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next