Advertisement

ಕ್ಷಮೆ ಯಾಚಿಸಿದ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌

07:19 PM Dec 10, 2021 | Team Udayavani |

ಮುಂಬೈ: ಎನ್‌ಸಿಬಿಯ ಅಧಿಕಾರಿ ಸಮೀರ್‌ ವಾಖೆಂಡೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಬಗ್ಗೆ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌ ಬಾಂಬೆ ಹೈ ಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ.

Advertisement

ಸುದ್ದಿಗೋಷ್ಠಿಗಳನ್ನು ನಡೆಸಿ, ವಾಖೆಂಡೆ ಮತ್ತವರ ಕುಟುಂಬದ ಬಗ್ಗೆ ಹೇಳಿಕೆಗಳನ್ನು ನೀಡಿ, ವೈಯಕ್ತಿಕ ದಾಳಿ ನಡೆಸಿದ್ದಾಗಿ ಸಮೀರ್‌ ತಂದೆ ಜ್ಞಾನದೇವ್‌ ವಾಖೆಂಡೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಪ್ರಕರಣದ ಸಂಬಂಧ ನವಾಬ್‌ ಅವರು 3 ಪುಟಗಳ ಅಫಿಡವಿಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

“ನೀವು ಒಬ್ಬ ಸಚಿವರು, ಸಾಮಾನ್ಯ ಜನರಂತೆ ವರ್ತಿಸಲಾಗುವುದಿಲ್ಲ’ ಎಂದು ನ್ಯಾಯಾಲಯ ನವಾಬ್‌ ಅವರಿಗೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next