Advertisement

ಸಿಧು ಮುಖ್ಯಮಂತ್ರಿಯಾಗಲು ಯತ್ನಿಸುತ್ತಿದ್ದಾರೆ; ಅಮರೀಂದರ್‌ ಸಿಂಗ್‌

09:39 AM May 20, 2019 | Vishnu Das |

ಅಮೃತಸರ:ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ಅಸಮಾಧಾನಕ್ಕೆ ಸಾಕ್ಷಿಯಾಗಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಸಚಿವ ನವಜೋತ್‌ ಸಿಂಗ್‌ ವಿರುದ್ಧ ಬಹಿರಂಗ ಆಕ್ರೋಶ  ಹೊರ ಹಾಕಿದ್ದಾರೆ.

Advertisement

7 ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಕ್ಕು ಚಲಾವಣೆಗೂ ಮುನ್ನ ಸುದ್ದಿಗಾರರೊಂದಿಗೆ ಅಮರೀಂದರ್‌ ಸಿಂಗ್‌ ಮಾತನಾಡಿದರು.

ನನ್ನ ಪತ್ನಿಗೆ ಟಿಕೆಟ್‌ ನೀಡಲು ತಡೆಯೊಡ್ಡಿದ್ದರು ಎಂದು ಆರೋಪಿಸಿದ್ದ ಸಿಧು ವಿರುದ್ಧ ಅಮರೀಂದರ್‌ ಸಿಂಗ್‌ ಆಕ್ರೋಶ ಹೊರ ಹಾಕಿದರು.

ಸಿಧು ಅವರೊಂದಿಗೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಅವರು ಮಹತ್ವಾಕಾಂಕ್ಷಿ, ಅದು ಒಳ್ಳೆಯದು. ಜನರು ಮಹತ್ವಾಕಾಂಕ್ಷೆಗಳನ್ನು ಹೊಂದಿರಬೇಕು. ಬಾಲ್ಯದಿಂದಲೂ ನಾನು ಸಿಧುವನ್ನು ನೋಡಿದ್ದೇನೆ ಮತ್ತು ಅವರೊಂದಿಗೆ ಯಾವುದೇ ಅಭಿಪ್ರಾಯವಿಲ್ಲ. ಅವರು ಬಹುಶಃ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ ಮತ್ತು ನನ್ನನ್ನುಬದಲಿಸಲು ಬಯಸಿದ್ದಾರೆ, ಅದೇ ಅವರ ವ್ಯವಹಾರವಾಗಿದೆ ಎಂದು ಕಿಡಿ ಕಾರಿದರು.

ಸಿಧು ಮತದಾನಕ್ಕೂ ಮುನ್ನ ಬೇಜವಾಬ್ಧಾರಿಯುತವಾಗಿ ನಡೆದುಕೊಂಡಿದ್ದಾರೆ. ಅಂತಹ ವರ್ತನೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next