Advertisement

ನವಜೋತ್‌ ಸಿಂಗ್‌ ಸಿಧುಗೆ ಸಚಿವ ಸ್ಥಾನ?

03:45 AM Mar 13, 2017 | |

ಚಂಡೀಗಢ: ಪಂಜಾಬ್‌ನಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದ್ದಂತೆ ಹೊಸ ಸಿಎಂ ಅಮರೀಂದರ್‌ ಸರ್ಕಾರದಲ್ಲಿ ಮಂತ್ರಿಯಾಗಲು ಪೈಪೊಟಿಯೂ ಹೆಚ್ಚಾಗುತ್ತಿದ್ದು ಕ್ರಿಕೆಟ್‌ಪಟು- ರಾಜಕಾರಣಿ ನವಜೋತ್‌ ಸಿಂಗ್‌ ಸಿಧು, ಮಾಜಿ ಹಾಕಿ ಕ್ಯಾಪ್ಟನ್‌ ಪರ್ಗತ್‌ಸಿಂಗ್‌ ಮತ್ತು ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಸೇರಿದಂತೆ ಹಲವರಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ.

Advertisement

ಆದರೆ ಸಿಎಂ ಅಭ್ಯರ್ಥಿಯಾಗಿರುವ ಅಮರೀಂದರ್‌ ಮಾತ್ರ ಯಾರನ್ನು ಸೇರಿಸಿಕೊಳ್ಳ ಬೇಕು ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಸಿಧು ಇತ್ತೀಚೆಗೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ ಸೇರಿದ್ದರು. ಚುನಾವಣೆಯಲ್ಲಿ ಅವರ ಪ್ರಭಾವವೂ ಹೆಚ್ಚಿದ್ದ ಕಾರಣ, ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನೊಂದೆಡೆ, ಮನ್‌ಪ್ರೀತ್‌ ಅವರು ಮಾಜಿ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಹತ್ತಿರದ ಸಂಬಂಧಿ ಎಂಬುದು ಪ್ರಮುಖ ವಿಷಯ ವಾಗಿದೆ. ಒಟ್ಟಿನಲ್ಲಿ ಯಾರ್ಯಾರಿಗೆ ಪಂಜಾಬ್‌ನ ಹೊಸ ಸಂಪುಟದಲ್ಲಿ ಅಧಿಕಾರ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. 10 ವರ್ಷಗಳ ಬಳಿಕ ಕಾಂಗ್ರೆಸ್‌ ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next