Advertisement

ಧವನ್ ಪಡೆಗೆ ಮತ್ತೊಂದು ಆಘಾತ: ಮತ್ತೋರ್ವ ಆಟಗಾರ ತಂಡದಿಂದ ಹೊರಕ್ಕೆ!

03:23 PM Jul 29, 2021 | Team Udayavani |

ಕೊಲಂಬೋ: ಕೋವಿಡ್ ಕಾರಣದಿಂದ ಸರಿಯಾದ ಆಟಗಾರರಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಖರ್ ಧವನ್ ಪಡೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಎರಡನೇ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ ನವದೀಪ್ ಸೈನಿ ಮೂರನೇ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

Advertisement

ಭಾರತ ಮತ್ತು ಲಂಕಾ ನಡುವಿನ ಅಂತಿಮ ಟಿ 20 ಪಂದ್ಯ ಇಂದು (ಗುರುವಾರ) ನಡೆಯಲಿದೆ. ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಸರಣಿ ಸಮಬಲವಾಗಿದ್ದು, ಇಂದು ಫೈನಲ್ ರೀತಿಯಂತೆ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಎರಡನೇ ಟಿ 20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ನವದೀಪ್ ಸೈನಿ ಗಾಯಗೊಂಡಿದ್ದರು. ಎಕ್ಸ್ಟಾ ಕವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೈನಿ ಚೆಂಡಿಗಾಗಿ ಹಾರಿದರು. ಈ ವೇಳೆ ರಭಸವಾಗಿ ನೆಲಕ್ಕೆ ಬಿದ್ದ ಕಾರಣ ಗಾಯಗೊಂಡಿದ್ದರು.

Advertisement

ಮೊದಲೇ ಆಟಗಾರರ ಅಲಭ್ಯತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಧವನ್ ಗೆ ಇದು ಮತ್ತಷ್ಟು ತಲೆನೋವು ತಂದಿದೆ. ಒಂದು ವೇಳೆ ಸೈನಿ ಫಿಟ್ ಇಲ್ಲದೇ ಇದ್ದರೆ ನೆಟ್ ಬೌಲರ್ ಆಗಿ ಲಂಕಾಗೆ ತೆರಳಿರುವ ಅರ್ಶ್ ದೀಪ್ ಸಿಂಗ್ ಅಥವಾ ಸಂದೀಪ್ ವಾರಿಯರ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next