Advertisement
ಪೂರ್ವಜರಿಂದಲೂ ಈ ಗೊಂಬೆ ಆರಾಧನೆಯ ಪದ್ಧತಿಯು ಆರಂಭಗೊಂಡಿದ್ದು, ಇದೀಗ ನಾಲ್ಕನೇ ಪೀಳಿಗೆಗೆ ಮುಂದುವರೆಯುತ್ತಿದ್ದು, ಗೊಂಬೆ ಆರಾಧನೆಗೆ 51 ವರ್ಷಗಳು ತುಂಬಿದೆ.
Related Articles
Advertisement
ಹಳೆ ಮೈಸೂರು, ಕೇರಳ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉಡುಪಿ ಉದ್ಯಾವರದಲ್ಲಿ 51ರ ಸಂಭ್ರಮ ಕಾಣುತ್ತಿದೆ.
ತಂದೆಯ ಕಾಲದಿಂದಲೂ ಆರಾಧಿಸಿಕೊಂಡು ಬರಲಾಗುತ್ತಿದೆ. ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂದರ್ಭ 1972ರಲ್ಲಿ ಹೈದರಾಬಾದ್ನಲ್ಲಿ ಆರಂಭಿಸಲಾಗಿದ್ದ ಈ ಗೊಂಬೆ ಆರಾಧನೆಯು ವರ್ಗಾವಣೆಗೊಂಡು ತೆರಳಿದ ಊರುಗಳಲ್ಲಿಯೂ ಪೂಜೆಯನ್ನು ಮುಂದುವರೆಸುತ್ತಾ ಬಂದಿದ್ದು, ತೆರಳಿದ ಊರುಗಳಲ್ಲಿ ಮನೆಯವರೆಲ್ಲರೂ ಗೊಂಬೆಯನ್ನು ಖರೀದಿಸುತ್ತಾ ಬಂದಿದ್ದು ಸಂಗ್ರಹಿಸಲಾಗಿದೆ.
ಈ ಬಾರಿ ರಷ್ಯಾದಿಂದ ಆಗಮಿಸಿದ ಪುತ್ರ ಮೆಕ್ಯಾನಿಕಲ್ ಇಂಜಿನಿಯರ್ ಮುರಳಿಕೃಷ್ಣ ನಿರ್ಮಿಸಿದ ಚಾಮುಂಡಿ ಬೆಟ್ಟಿ, ವನ, ಕೆಆರ್ಎಸ್ ಡ್ಯಾಂ ವಿಶೇಷ ಆಕರ್ಷಣೆ ಆಗಿದೆ –ಯು. ವಾಸುದೇವ ಭಟ್, ಸಂಪಿಗೆನಗರ, ಉದ್ಯಾವರ
-ವಿಜಯ ಆಚಾರ್ಯ ಉಚ್ಚಿಲ