Advertisement
ಎಲ್ಲ ನಗರಗಳೂ ದಿನದಿಂದ ದಿನಕ್ಕೆ ತನ್ನ ನಗರತನವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಇದರ ಪರಿಣಾಮ ಪರಿಸರ- ಪ್ರಕೃತಿಗೆ ಪೂರಕ, ನೈಸರ್ಗಿಕ ಇತ್ಯಾದಿ ಶಬ್ದಗಳು ನಿಘಂಟಿಗೆ ಸೇರುವ ಹಂತದಲ್ಲಿರುವಾಗ ಒಂದರ್ಥದಲ್ಲಿ ಎಲ್ಲರ ಬದುಕಿನಲ್ಲಿ ಇದರ ಸಹಾಯಕ್ಕೆ ಬಂದದ್ದು ಕೋವಿಡ್-19 ವೈರಸ್.
Related Articles
ನೈಸರ್ಗಿಕ ಬಣ್ಣವೆಂದಾಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಕೊಡಲೇ ಇಲ್ಲ ಎಂದರ್ಥವಲ್ಲ. ಎಲ್ಲಿ ಮಳೆ ನೀರು ಹೆಚ್ಚಾಗಿ ಬೀಳುತ್ತದೋ ಅಲ್ಲಿ ಮಣ್ಣು ತೋಯ್ದು ಹೋಗುವ ಕಾರಣ ಅಂತಹ ಕಡೆ ಮಾರುಕಟ್ಟೆ ಬಣ್ಣವನ್ನು ಕೊಡಲಾಗಿದೆ. ಎಲ್ಲಿ ಮಳೆ ನೀರು ಬೀಳುವುದಿಲ್ಲವೋ, ಎತ್ತರ ಪ್ರದೇಶವೋ ಅಲ್ಲಿ ನೈಸರ್ಗಿಕ ಬಣ್ಣ ಕೊಡಲಾಗುತ್ತಿದೆ. ಬಣ್ಣ ಕೊಡುವುದೆಂದರೆ ಇರುವ ಬಣ್ಣದ ಪದರದ ಮೇಲೆ ಇನ್ನೊಂದು ಪದರ ಕೊಡುವುದೆಂಬ ತಿಳಿವಳಿಕೆ ಇದೆ. ಇದು ಹಾಗಲ್ಲ. ಹಳೆಯ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡಲಾಗುತ್ತಿದೆ. ಇದು ಆರೋಗ್ಯಕ್ಕೂ ಲಾಭ, ಖರ್ಚೂ ಕಡಿಮೆ, ಏನೇ ಖರ್ಚಿದ್ದರೂ ಅದು ಕೆಲಸದವರಿಗೆ ಮಾತ್ರ. ಕಲಾವಿದ ಪುರುಷೋತ್ತಮ ಅಡ್ವೆಯವರು ನವೀಕರಣ ಕೆಲಸಗಳಿಗೆ ಮಾರ್ಗದರ್ಶನ ಕೊಡುತ್ತಿದ್ದಾರೆ.
Advertisement
ಕಣ್ಮರೆಯ ಕಲೆ ಮೇಲೆ ಕಣ್ಣುಮಣ್ಣು, ಸೆಗಣಿ ಮಿಶ್ರಿತ ಬಣ್ಣವು ಹಳೆಯ ಶೈಲಿ, ಹಳೆಯ ಸಂಸ್ಕೃತಿ. ಹಿಂದೆ ಮನೆಗಳಲ್ಲಿ ಇಂತಹ ಗೋಡೆಗಳಿದ್ದವು, ಗೋಮಯದಿಂದ ಮಾಡಿದ ನೆಲಗಳು ಕಾಣುತ್ತಿದ್ದವು. ಮುಖ್ಯವಾದ ಸಂತೃಪ್ತಿ ಎಂದರೆ ಈಗಲೂ 28 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುವುದು. ಕೊನೆಗೆ ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯಶಾಲೆಯ ಕೆಲಸ ಮಾಡುತ್ತೇವೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ,
ಶ್ರೀಕೃಷ್ಣಮಠ, ಉಡುಪಿ ಇದು ಸುಮಾರು ನಾಲ್ಕು ತಿಂಗಳ ಕೆಲಸ. 28 ಕೆಲಸದವರು ಇದ್ದಾರೆ. ಮಜೂರಿ ಸುಮಾರು 20 ಲ.ರೂ. ತಗಲುತ್ತದೆ.
-ಗೋವಿಂದರಾಜ್, ವ್ಯವಸ್ಥಾಪಕರು, ಶ್ರೀಕೃಷ್ಣಮಠ, ಉಡುಪಿ ನಾನು ಇದೇ ಮೊದಲ ಬಾರಿಗೆ ಈ ನೈಸರ್ಗಿಕ ಬಣ್ಣವನ್ನು ಕೊಟ್ಟಿದ್ದೇನೆ. ಮಿತವ್ಯಯದಲ್ಲಿ ಬಣ್ಣ ಕೊಡಬೇಕೆನ್ನುವವರಿಗೆ ಇದೊಂದು ಉತ್ತಮ ಅವಕಾಶ.
-ರಮೇಶ್, ಬೈಲಕೆರೆ ಮಾರುಕಟ್ಟೆಯಲ್ಲಿ ಸಿಗುವ ಪೇಂಟಿಂಗ್ ಕೈ, ಮೈಗೆ ತಾಗಿದರೆ ಅದನ್ನು ತೆಗೆಯುವುದು ಕಷ್ಟ. ಇದನ್ನು ಕೈಯಲ್ಲಿಯೇ ತಯಾರಿಸುತ್ತೇವೆ. ನಾವೆಲ್ಲರೂ ತುಂಬು ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
-ವಿನ್ಸಿ, ಮಣಿಪಾಲ