Advertisement

ಶಂಕರ್‌ ಬಿದರಿ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ

11:14 PM Jun 11, 2019 | Lakshmi GovindaRaj |

ಬೆಂಗಳೂರು: ಅಖೀಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಘಟಕದ ಪದಾಧಿಕಾರಿಗಳನ್ನು ನೇಮಿಸಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆದೇಶ ಹೊರಡಿಸಿದ್ದಾರೆ. ಮಹಾಸಭೆಯ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ನಿವೃತ್ತ ಡಿಜಿಪಿ ಶಂಕರ ಬಿದರಿಯವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

Advertisement

ರಾಜ್ಯ ಘಟಕದ ಅಧ್ಯಕ್ಷ ಎನ್‌.ತಿಪ್ಪಣ್ಣ ಅವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್‌ ಕೋರೆ, ಶಾಸಕರಾದ ವೀರಣ್ಣ ಚರಂತಿ ಮಠ, ವೆಂಕಟರೆಡ್ಡಿ ಮುದ್ನಾಳ್‌, ಬಿ.ಎಸ್‌. ಸಚ್ಚಿದಾನಂದ ಮೂರ್ತಿ, ಅನಬೇರು ರಾಜಣ್ಣ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಎಸ್‌.ಎಸ್‌.ಗಣೇಶ್‌, ಮಧುರಾ ಅಶೋಕ್‌ಕುಮಾರ್‌, ಎ.ಎಸ್‌.ವೀರಣ್ಣ, ಗುರಮ್ಮ ಸಿದ್ದರೆಡ್ಡಿ ಹಾಗೂ ಬಾಬುರಾವ್‌ ತುಂಬಾ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಕಾರ್ಯದರ್ಶಿಗಳಾಗಿ ಜಿ. ಗುರುಬಸಪ್ಪ, ಕಲ್ಯಾಣರಾವ್‌ ಮುಚಳಂಬಿ, ಎಚ್‌.ಎಂ. ರೇಣುಕಾ ಪ್ರಸನ್ನ ಹಾಗೂ ಖಜಾಂಚಿಯಾಗಿ ಕೆ.ಎನ್‌. ಜಯಲಿಂಗಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next